ಹಳಿಯಾಳ:- ಹಳಿಯಾಳದ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ 2018-19 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪುರುಷರ ತಂಡದ ಕುಸ್ತಿ ತರಬೇತಿ ಪಡೆದ ತಂಡವು ದಿ.14 ರಿಂದ ದಿ.18 ರವರೆಗೆ ಹರಿಯಾಣದ ಭಿವಾನಿಯ ಚೌಧರಿ ಬನಸಿಲಾಲ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಅಂತರ ವಿಶ್ವವಿದ್ಯಾಲಯಗಳ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ವಿ.ವಿ ಕಟ್ಟಿ ತಿಳಿಸಿದ್ದಾರೆ.
ಈ ತಂಡವು ರಾಜ್ಯದ ವಿವಿಧ ಇಂಜನಿಯರಿಂಗ್ ಕಾಲೇಜಿನ 8 ವಿದ್ಯಾರ್ಥಿಗಳನ್ನು ಒಳಗೊಂಡಿದ್ದು ಮುಧೋಳ ಇಂಜನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಹನುಮಂತ ತಳವಾರ್ ಈ ತಂಡದ ತರಬೇತುದಾರರಾಗಿದ್ದಾರೆ.
ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಗದಿಗೆಪ್ಪಾ ಯಳ್ಳೂರ್ ತಂಡದ ವ್ಯವಸ್ಥಾಪಕರಾಗಿದ್ದಾರೆ.
Leave a Comment