ಹಳಿಯಾಳ,
ದೇಶದ ಸರ್ವೊಚ್ಚ ನ್ಯಾಯಾಲಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡಬೇಕೆಂಬ ತೀರ್ಪಿನ ವಿರುದ್ಧ ಇಲ್ಲಿಯ ಹಿಂದೂ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಅಯ್ಯಪ್ಪಾ ಸೇವ ಸಮಾಜ ಹಾಗು ಇತರ ಸಂಘಟನೆಗಳು ತಮ್ಮ ವಿರೋಧ ವ್ಯಕ್ತಪಡಿಸಿದ್ದು ಗುರುವಾರ ತಹಶೀಲದಾರರಿಗೆ ರಾಷ್ಷ್ಟ್ರಪತಿ ಹೆಸರಿನಲ್ಲಿದ್ದ ಮನವಿಯೊಂದು ಅರ್ಪಿಸಿದ್ದಾರೆ. ಮನವಿಯಲ್ಲಿ ಅಯ್ಯಪ್ಪಾ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸಿದ್ದ ಸಂಗತಿ ಶತಮಾನಗಳ ನಿರ್ಧಾರವಾಗಿದ್ದು ಅದನ್ನು ಈಗ ಬದಲಾಯಿಸುವದು ತಪ್ಪು ಹಾಗು ಗೌರವಾನ್ವಿತ ರಾಷ್ಟ್ರಪತಿಗಳು ದೇಶದಲ್ಲಿಯ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವದು ಸೂಕ್ತವಲ್ಲ ಎಂಬುವದು ತಮ್ಮ ಅಭಿಪ್ರಾಯವಾಗಿದೆ ಎಂದು ನಮೂದಿಸಲಾಗಿದೆ. ರಾಷ್ಟ್ರಪತಿಗಳು ತಕ್ಷಣ ಮಧ್ಯಪ್ರವೇಶಿಸಿ ಸರ್ವೊಚ್ಛ ನ್ಯಾಯಾಲಯದ ತೀರ್ಪನ್ನು ಹಿಂದೆ ಪಡೆಯುವಂತೆ ಮಾಡಬೇಕೆಂದು ಆಗ್ರಹಿಸಲಾಗಿದೆ. ಪ್ರತಿಭಟನೆಯ ನೇತೃತ್ವ ವಿಎಚ್ಪಿ ಹಳಿಯಾಳ ಘಟಕದ ಅಧ್ಯಕ್ಷ ಶ್ರೀಪತಿ ಭಟ್, ಅಯ್ಯಪ್ಪಾ ಸ್ವಾಮಿ ಸಮಾಜದ ಅಧ್ಯಕ್ಷ ಗುರು ತೇಲಂಗ, ಮಾಜಿ ಶಾಸಕ ಸುನೀಲ ಹೆಗಡೆ ಹಾಗು ಇತರರು ವಹಿಸಿದ್ದರು. ಮನವಿ ಅರ್ಪಿಸುವ ಮುನ್ನ ಹಿಂದು ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸರ್ವೊಚ್ಛ ನ್ಯಾಯಾಲಯದ ತೀರ್ಪಿನ ವಿರುದ್ಧ ಘೋಷಣೆ ಕೂಗಿದರು.
ಇದರೊಂದಿಗೆ ಅಯ್ಯಪ್ಪಾ ಚಿತ್ರವಿದೆ.
Leave a Comment