ಹಳಿಯಾಳ:- ಸಮಾಜದ ಪ್ರತಿಯೊಂದು ವರ್ಗವು ಸರ್ವಾಂಗಿಣ ಅಭಿವೃದ್ಧಿ ಹೊಂದಲು ಸರ್ಕಾರ ಅನೇಕ ಸೌಲಭ್ಯಗಳನ್ನು ಯೋಜನೆಗಳ ಮುಖಾಂತರ ರೂಪಿಸುತ್ತದೆ ಯೋಜನೆಗಳನ್ನು ಕಾನೂನು ರಿತ್ಯ ಅರಿತು ಪ್ರತಿಯೊಬ್ಬರು ತಮ್ಮ ಹಕ್ಕನ್ನು ಪಡೆಯಿರಿ ಎಂದು ನ್ಯಾಂiÀiದೀಶೆÀ ಶಿಲ್ಪಾ ಎಚ್ಎ ಹೇಳಿದರು.
ತಾಲೂಕಿನಾದ್ಯಂತ ನವೆಂಬರ 18 ರವರೆಗೆ ನಡೆಯಲಿರುವ ಮನೆಬಾಗಿಲಿಗೆ ತೆರಳಿ ಕಾನೂನು ಅರಿವು ಕಾರ್ಯಕ್ರಮ ಇಂದು ಪಟ್ಟಣದ ಹೊಸುರಗಲ್ಲಿ ಹಾಗೂ ಸ್ಲಂ ಏರಿಯಾದಲ್ಲಿ ಭೇಟಿ ನೀಡಿತು.
ತಾಲೂಕು ಕಾನೂನು ಸೇವಾ ಸಮಿತಿ, ಅರೇ ಕಾಲಿಕ ಕಾನೂನು ಸ್ವಯಂ ಸೇವಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿಂದ ಹಮ್ಮಿಕೊಳ್ಳಲಾದ ಮನೆ ಬಾಗಿಲಿಗೆ ತೆರಳಿ ಕಾನೂನು ಜಾಗೃತಿ ಅಭಿಯಾನದ ಈ ಕಾರ್ಯಕ್ರಮದಲ್ಲಿ ನ್ಯಾಯಾಧಿಶರು ಹಾಗೂ ನ್ಯಾಯವಾದಿಗಳು ಜನರೊಂದಿಗೆ ಸಂವಾದ ನಡೆಸಿದರು.
ಸರ್ಕಾರ ಪ್ರತಿಯೊಬ್ಬರ ಏಳಿಗೆಗಾಗಿ ಹಲವಾರು ಯೋಜನೆಗಳ ವಿವಿಧ ಇಲಾಖೆಗಳ ಮುಖಾಂತರ ಜಾರಿಗೊಳಿಸಿದೆ ಇಲಾಖಾವಾರು ಅಧಿಕಾರಿಗಳು ಸಹ ಮನೆ ಬಾಗಿಲಿಗೆ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ ಅವುಗಳ ಸದುಪಯೋಗ ಪಡೆದುಕೊಳ್ಳಿ ಎಂದು ಉಚಿತ ಕಾನೂನು ಸೇವೆ ಮತ್ತಿತರ ಕಾನೂನುಗಳ ಕುರಿತು ವಿವರಿಸಿದರು.
ನ್ಯಾಯಾಧೀಶ ಬಸವರಾಜ ಸನದಿ ಮಾತನಾಡಿ ಪ್ರತಿಯೊಬ್ಬರಿಗೂ ಸಂವಿಧಾನ ಬದ್ಧವಾದ ಸಮಾನವಾದ ಹಕ್ಕು ಇದೆ ಪ್ರತಿಯೊಬ್ಬರ ಮನೋಬಾವ ಬದಲಾಗಬೇಕು ಸಮಾಜದ ಬದಲಾವಣೆಗಳಿಗೆ ಅನುಗುನವಾಗಿ ಕಾನೂನು ರಿತ್ಯ ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರ ಹಾಗೂ ಸೇವಾ ಸಮಿತಿಯಿಂದ ಕೈಗೊಳ್ಳುವ ಕಾರ್ಯಗಳ ಕುರಿತು ಅರಿಯುವಂತೆ ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಮ್ ಮುಲ್ಲಾ ಮಾತನಾಡಿ ಸರ್ಕಾರ ಪ್ರತಿಯೊಬ್ಬ ಮಗುವಿನ ಸರ್ವಾಂಗೀಣ ಅಬೀವೃದ್ಧಿಗಾಗಿ ಹಲವಾರು ಯೋಜನೆಗಳನ್ನು ನೀಡುತ್ತಿದ್ದು. ಪ್ರತಿ ಮಗುವಿಗೆ ಕಡ್ಡಾಯವಾಗಿ ಶಿಕ್ಷಣ ನಿಡಿ ಎಂದರು.
ಸಹಾಯಕ ಸರಕಾರಿ ಅಭಿಯೋಜಕ ಅಜಿತ ಜನಗೌಡ, ವಕೀಲ ಸಂಘದ ಅಧ್ಯಕ್ಷ ಅಶೋಕ ಎಮ್ ಪಾಟೀಲ, ಅರೇ ಕಾಲಿಕ ಕಾನೂನು ಸ್ವಯಂ ಸೇವಕರಾದ ಸುರೇಖಾ ಗುನಗಾ, ಎಸ್ ಎಲ್ ಸೋಮಣ್ಣವರ, ಎ.ಎಫ್.ಕಿತ್ತೂರ , ಎಮ್ ಎನ್ ಜುಂಜವಾಡಕರ, ಸಂತೋಷ ಹಬ್ಬು, ಎಸ್.ವೈ ಗುಪಿತ್, ವಕೀಲ ಸಂಘದ ಎಲ್ಲಾ ಸದಸ್ಯರು ಇದ್ದರು.
Leave a Comment