ಹಳಿಯಾಳ:- ದಿ.16 ರಾತ್ರಿಯಿಂದ ದಿ.17ರ ಬೆಳಗಿನ ಜಾವದ ಅವಧಿಯಲ್ಲಿ ಹಳಿಯಾಳ ಪಟ್ಟಣದ ಕೆಲವು ಬಡಾವಣೆಗಳಲ್ಲಿ ಸರಣಿ ಕಳ್ಳತನವಾಗಿದ್ದು ಪಟ್ಟಣದ ಜನತೆಯ ನಿದ್ದೆಗೆಡಿಸಿದೆ.
ಪಟ್ಟಣದ ಗಣೇಶ ನಗರದ ದೂಳಪ್ಪ ಬಸವರಾಜ ಅಂಜುಟಗಿ ಎನ್ನುವವರು ತಮ್ಮ ಮನೆಯ ಮುಂದೆ ನಿಲ್ಲಿಸಿಟ್ಟಿದ್ದ ಸುಮಾರು 25ಸಾವಿರ ರೂ. ಬೆಲೆಯ ಸ್ಪೆಂಡರ್ ಬೈಕ್ ಹಾಗೂ ಇದೆ ಬಡಾವಣೆಯಲ್ಲಿ ಮಹಾಂತೇಶ ರಾಜಶೇಖರ ಹಿರೆಮಠ ಎನ್ನುವವರು ಮನೆಯ ಮುಂದೆ ನಿಲ್ಲಿಸಿದ್ದ 50ಸಾವಿರ ಬೆಲೆಯ ಹೊಂಡಾ ಸಿಟಿ ಶೈನ್ ಬೈಕ್ ಅನ್ನು ಎಗರಿಸಿಕೊಂಡು ಹೋಗಿದ್ದು ವಾಹನ ಕಳೆದುಕೊಂಡವರಿಬ್ಬರು ಹಳಿಯಾಳ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಇನ್ನೂ ಇದೆ ಬಡಾವಣೆಯಲ್ಲಿ ಉತ್ತಮ ರಾಠೋಡ ಎನ್ನುವವರ ಮನೆಗೆ ಕನ್ನ ಹಾಕಿರುವ ಕಳ್ಳರು ಸುಮಾರು 30 ಸಾವಿರ ಬೆಲೆ ಬಾಳುವ ಲ್ಯಾಪಟಾಪ್ ಅನ್ನು ಕಳ್ಳತನ ಮಾಡಿದ್ದಾರೆ. ಅಲ್ಲದೇ ಆನೆಗುಂದಿ ಬಡಾವಣೆ ಬಳಿಯ ಗೌಳಿಗಲ್ಲಿ ಸನಿಹದ ಪ್ರದೇಶದ 2 ಮನೆಗಳಿಗೆ ಕನ್ನ ಹಾಕಲು ಯತ್ನಿಸಿರುವ ಕಳ್ಳರು ಮನೆಯ ಬಾಗಿಲನ್ನು ಮುರಿದು ಒಳನುಗ್ಗಿದ್ದು ಮನೆಯಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಚೆಲ್ಲಿ ಹೊಗಿದ್ದು ಯಾವ ವಸ್ತುಗಳು ಕಳ್ಳರ ಪಾಲಾಗಿವೆ ಎಂದು ಇನ್ನೂ ತಿಳಿದು ಬಂದಿಲ್ಲ.
ಹಳಿಯಾಳ ಪೋಲಿಸ್ ಠಾಣೆಯಲ್ಲಿ ಸರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ 3 ಪ್ರಕರಣಗಳು ಮಾತ್ರ ದಾಖಲಾಗಿದ್ದು ಇನ್ನುಳಿದ ಪ್ರಕರಣಗಳು ದಾಖಲಾಗಲಿವೆ ಎಂದು ಹೇಳಲಾಗಿದ್ದು ಘಟನಾ ಸ್ಥಳಕ್ಕೆ ಹಳಿಯಾಳ ಪಿಎಸ್ಐ ಆನಂದಮೂರ್ತಿ, ಸಿಪಿಐ ಲೋಕಾಪುರ ಬಿಎಸ್ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Leave a Comment