ಹೊನ್ನಾವರ ; ಕಳೆದ ಡಿ. 6 ರಂದು ಕರ್ನಾಟಕ ಸರ್ಕಾರದ ಅಂದಿನ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ಶಂಕುಸ್ಫಾಪನೆ ನೆರವೇರಿಸಿದ ಕುಮಟಾ- ಹೊನ್ನಾವರ ಕ್ಷೇತ್ರದ ಮಹಾತ್ವಾಕಾಂಕ್ಷೆ ಯೇಜನೆಗಳಲ್ಲೊಂದಾದ ಶರಾವತಿ ನದಿಯಿಂದ ಹೊನ್ನಾವರ ಪಟ್ಟಣ
ಮತ್ತು 9 ಗ್ರಾಮ ಪಂಚಾಯತಿಗಳಿಗೆ ನೀರು ಪೂರೈಸುವ ಅಂದಾಜು ರೂಪಾಯಿ 122ಕೋಟಿ ಅನುದಾನದ “ಶರಾವತಿ ಕುಡಿಯುವ ನೀರಿನ ಯೋಜನೆ”ಯನ್ನು ಶೀಘ್ರ ಆರಂಭಿಸುವ ಕುರಿತು ಕುಮಟಾ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕಿÀ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಕರ್ನಾಟಕ ಘನ ಸರ್ಕಾರದ ನಗರಾಭಿವೃಧ್ಧಿ ಹಾಗೂ ವಸತಿ ಸಚಿವರಾದ ಯು.ಟಿ.ಖಾದರ್ ಅವರನ್ನು ಬೇಟಿಯಾಗಿ ಚರ್ಚಿಸಿ ಯೋಜನೆಯನ್ನು ಶೀಘ್ರ ಆರಂಭಿಸುವಂತೆ ಒತ್ತಾಯಿಸಿದರು.
Leave a Comment