ಹೊನ್ನಾವರ: ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದಲ್ಲಿ Diya Technology ಎನ್ನುವ ಮಂಗಳೂರು ಮೂಲದ ಕಂಪನಿಯು ತಾಂತ್ರಿಕ ಸಹಾಯಕರ ಹುದ್ದೆಗಾಗಿ ಕ್ಯಾಂಪಸ್ ಸಂದರ್ಶನ ನಡೆಸಿತು.
ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಿ.ಇ., ಬಿ.ಸಿ.ಎ., ಬಿ.ಎಸ್ಸಿ. ಪದವಿ ಹೊಂದಿದ 43 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ನೇಮಕಾತಿ ಪ್ರಕ್ರಿಯೆಯು Aptitude Test, Essay Writing, Computer Test ಸಂದರ್ಶನ ನಡೆಸಲಾಯಿತು. ನೆಮಕಾತಿ ಪ್ರಕ್ರಿಯೆಯನ್ನು Diya Technology ಕಂಪನಿಯ ಸೀನಿಯರ್ ಎಚ್. ಆರ್. ಮ್ಯಾನೇಜರ್ ಶ್ರೀನಿವಾಸ ಭಟ್ಟ ಹಾಗೂ ಎಚ್. ಆರ್. ಎಕ್ಸಿಕ್ಯೂಟಿವ್ ಲಕ್ಷ್ಮೀಶ ಭಟ್ಟ ಮತ್ತು ಅವರ ಸಿಬ್ಬಂದಿಗಳು ನಡೆಸಿಕೊಟ್ಟರು. ನೇಮಕಾತಿ ಪ್ರಕ್ರಿಯೆಗಳಲ್ಲಿ ಭಾಗವಹಿಸಿ ಅಂತಿಮವಾಗಿ ಒಟ್ಟೂ 7 ಪದವಿಧರರು ಆಯ್ಕೆಯಾಗಿ ಪ್ರಾಚಾರ್ಯರಿಂದ ನೇಮಕಾತಿ ಆದೇಶ ಪಡೆದುಕೊಂಡರು.
À ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಸಂಸ್ಥೆಯ ಕಾರ್ಯದರ್ಶಿ ಎಸ್. ಎಂ. ಭಟ್ಟ ಮಾತನಾಡಿ, ನಮ್ಮ ಮಹಾವಿದ್ಯಾಲಯ ಜಿಲ್ಲೆಯ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ಪ್ರತಿ ವರ್ಷ ವಿವಿಧ ಕಂಪನಿಗಳನ್ನು ಕರೆಸುವ ಮೂಲಕ ಅವಕಾಶ ಕಲ್ಪಿಸಲಾಗುತ್ತದೆ. ಈ ಮೂಲಕ ನಮ್ಮ ಸಂಸ್ಥೆಯನ್ನು ತಮ್ಮ ವೃತ್ತಿ ಜೀವನದಲ್ಲಿ ನೆನಪಿಡಿ ಎಂದು ಕಿವಿಮಾತು ಹೇಳಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ಎಂ. ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಆiಥಿಚಿ ಖಿeಛಿhಟಿoಟogಥಿ ಕಂಪನಿಯ ಸೀನಿಯರ್ ಎಚ್. ಆರ್. ಮ್ಯಾನೇಜರ್ ಶ್ರೀನಿವಾಸ ಭಟ್ಟ ಉದ್ಯೋಗದ ಮಾಹಿತಿ ನೀಡಿದರು. ಕಾಲೇಜಿನ ಪ್ಲೇಸ್ಮೆಂಟ್ ಆಫೀಸರ್ ಡಾ. ಡಿ. ಎಲ್. ಹೆಬ್ಬಾರ ಪ್ರಾಸ್ಥಾವಿಕ ಮಾತುಗಳೊಂದಿಗೆ ಸರ್ವರನ್ನೂ ಸ್ವಾಗತಿಸಿದರು. ಎಚ್. ಟಿ. ಅರ್ವಾರೆ ವಂದಿಸಿದರು. ಪ್ರೊ. ಯೋಗಿತಾ ಕೆ. ಎಸ್. ಮತ್ತು ಪ್ರೊ. ಎಚ್. ಟಿ. ಅರ್ವಾರೆ ನಿರೂಪಿಸಿದರು.
Leave a Comment