ಹೊನ್ನಾವರ. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಗ್ವಾ ವಲಯದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ತಾಲೂಕಿನ ಮುಗ್ವಾ ಸುಬ್ರಹ್ಮಣ್ಯದಲ್ಲಿ ನಡೆಯಿತು
ಉದ್ಘಾಟನೆಯನ್ನು ಕೆ.ಎಸ್.ಹೆಗಡೆ, ಉಪನ್ಯಾಸಕರು ನೇರವೇರಿಸಿ ಮಾತನಾಡಿ ಗಾಂಧೀಜಿ ಕಂಡ ಗ್ರಾಮಾಭೀವೃದ್ದಿಯ ಕನಸನ್ನು ನನಸು ಮಾಡಲು ಶ್ರಮ ವಹಿಸುತ್ತಿರುವ ಕೆಲಸ ಈ ಗ್ರಾಂಆಭಿವೃದ್ದಿ ಯೋಜನೆ ಮಾಡುತ್ತಿದ್ದು ನಮ್ಮ ದೇಶದಲ್ಲಿಯೇ ಅತ್ಯುತ್ತಮ ಸಂಘಟನೆಯಾಗಿದೆ. ರಾಜಕಾರಣ ಗಳು ರಾಮರಾಜ್ಯದ ಪರಿಕಲ್ಪನೆಯ ಕನಸನ್ನು ಕಾಣುತ್ತಾ ಭಾಷಣ ಮಾಡುತ್ತಿದ್ದರೆ ಅದನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಮೂಲಕ ಕಾರ್ಯರೂಪಕ್ಕೆ ತರುವುದರ ಮೂಲಕ ಗ್ರಾಮಗಳ ಉದ್ದಾರ ಆದರೆ ಮಾತ್ರ ದೇಶ ಉದ್ದಾರ ಎನ್ನುವುದನ್ನು ಸಮಾಜಕ್ಕೆ ತೋರಿಸಿಕೊಟ್ಟರು. ಕೇವಲ ಸ್ವಾವಲಂಭನೆಯ ಪಾಠವನ್ನು ಬೋಧಿಸದೆ ಶಿಸ್ತು, ದುಶ್ಚಟ ನಿವಾರಣೆ, ಹಣಕಾಶಿನ ವ್ಯವಹಾರ ಜ್ಞಾನವನ್ನು ಒಂದೇ ಸಂಘಟನೆಯ ಮೂಲಕ ಪರಿಚಯಿಸಿದೆ ಎಂದರು.
ಮುಖ್ಯ ಅತಿಥಿ ಆಗಮಿಸಿದ ಹಿರಿಯ ಪತ್ರಕರ್ತರಾದ ಜಿ.ಯು.ಭಟ್, ಮಾತನಾಡಿ ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿರುವ ಈ ಯೋಜನೆಯಲ್ಲಿ 33 ಲಕ್ಷ ಕುಟುಂಬದವರು ಇದ್ದಾರೆ. 1 ಕೋಟಿ ಸದಸ್ಯರಾಗಿರುವ ಕೇಲವೇ ಕೆಲವು ಸಂಘಟನೆಯಲ್ಲಿ ಇದು ಉತ್ತಮ ಸಂಘಟನೆ. ಸರ್ಕಾರ ಮಾಡಲು ಅಸಾಧ್ಯವಾದ ಹಲವಾರು ಯೋಜನೆಯನ್ನು ಜಾರಿಗೆ ತಂದು ಅದರಲ್ಲಿ ಯಶಸ್ಸು ಗಳಿಸಿದ ಪೂಜ್ಯ ಹೆಗ್ಗಡೆಯವರು ಜೈನ ಹಾಗೂ ಹಿಂದೂ ಧರ್ಮವನ್ನು ಸಮಾನಾಗಿ ಗೌರವಿಸುವಂತವರು. ಯಾವುದೇ ಜಾತಿ ಧರ್ಮದ ಭೇಧವಿಲ್ಲದೆ ಎಲ್ಲರ ಏಳಿಗೆಗಾಗಿ ಶ್ರಮಿಸುವ ಹೆಗ್ಗಡೆ ಮನೆತನದಲ್ಲಿ 50 ವರ್ಷಗಳಿಂದಲೂ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ ಎಂದು ಯೋಜನೇಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಯೋಜನಾಧಿಕಾರಿ ಎಂ.ಎಸ್.ಈಶ್ವರ್, ಮಾತನಾಡಿ ಕಳೆದ 14 ವರ್ಷದಿಂದ ಹೊನ್ನಾವರ ತಾಲೂಕಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಹಲವಾರು ಕಾರ್ಯಕ್ರಮಗಳನ್ನು ಯಶ್ವಸಿಯಾಗಿ ಆಯೋಜಿಸಿದೆ. ವ್ಯವಹಾರಕ್ಕಾಗಿ ಮಾತ್ರ ಕಾರ್ಯನಿರ್ವಹಿಸದೆ ಸಾಮಾಜಿಕ ಆರ್ಥಿಕ ಶೈಕ್ಷಣ ಕವಾಗಿ ಪೋತ್ಸಾಹ ನೀಡುತ್ತಾ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿದೆ ಎಂದು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು
ಸನ್ಮಾನ : ಮುಗ್ವಾ ಕಾರ್ಯಕ್ಷೇತ್ರದ ಸಾಧಕ ಕೃಷಿಕರನ್ನು ಹಾಗೂ ಗಿಡಮೂಲಿಕೆ ತಜ್ಞರನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಸ್.ಆರ್.ಹೆಗಡೆ, ಪೂಜಾ ಸಮಿತಿ ಅಧ್ಯಕ್ಷರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶಿವರಾಜ ಮೇಸ್ತ, ಮುಗ್ವಾ ಗ್ರಾಮ ಪಂಚಾಯತ ಉಪಾಧ್ಯಕ್ಷ ಆಯ್.ವಿ.ನಾಯ್ಕ, ಸುಬ್ರಾಯ ಹೆಗಡೆ, ಒಕ್ಕೂಟದ ಅಧ್ಯಕ್ಷರಾದ ಸುಮಿತ್ರಾ ಮೇಸ್ತ, ಮಂಜುನಾಥ ನಾಯ್ಕ. ಉಪಸ್ಥಿತರಿದ್ದರು.
ವಲಯದ ಮೇಲ್ವಿಚಾರಕಿ ಮಾಲಿನಿ ನಾಯ್ಕ, ಸ್ವಾಗತಿಸಿ, ಸೇವಾಪ್ರತಿನಿಧಿ ವಿದ್ಯಾ ವಂದಿಸಿದರು. ತಿಮ್ಮಪ್ಪ ಕಾರ್ಯಕ್ರಮ ನಿರ್ವಹಿಸಿದರೆ ನಾಗರತ್ನ ವರದಿ ವಾಚಿಸಿದರು.
Leave a Comment