ಹಳಿಯಾಳ:- ರಾಜ್ಯ ವಕ್ಫ್ ಬೊರ್ಡ ಅಧಿನದಲ್ಲಿರುವ ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಅಂಜುಮನ್ ಸಂಸ್ಥೆಯ ಇಕ್ಬಾಲ್ ಎಜುಕೇಶನ್ ಸೋಸೈಟಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ ಭಾನುವಾರ ಶಾಂತಿಯುತವಾಗಿ ಮತದಾನ ನಡೆಯಿತು.
ಇದೆ ಪ್ರಥಮ ಬಾರಿಗೆ ಚುನಾವಣೆ ಮೂಲಕ ಸದಸ್ಯರನ್ನು ಆಯ್ಕೆ ಮಾಡಲಾಗುತ್ತಿದ್ದು 15 ಜನ ಸದಸ್ಯರಿರುವ ಇಕ್ಬಾಲ್ ಎಜುಕೇಶನ್ ಸೋಸೈಟಿಯ ಚುನಾವಣೆ ಅತ್ಯಂತ ತುರುಸಿನಿಂದ ಕೂಡಿತ್ತು ಅಲ್ಲದೇ 15 ಸದಸ್ಯರ ಸೋಸೈಟಿಗೆ 46 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಒಬ್ಬ ಮತದಾರ 15 ಮತ ಚಲಾಯಿಸುವ ಅವಕಾಶ ಇಲ್ಲಿ ನೀಡಲಾಗಿತ್ತು. ಅಂಜುಮನ ಶಾಲೆಯಲ್ಲಿ 300ರಂತೆ ಮತದಾರರನ್ನು ವಿಂಗಡಿಸಿ 4 ಮತದಾನ ಕೇಂದ್ರ ತೆರೆಯಲಾಗಿತ್ತು.
ಒಟ್ಟೂ 1233 ಮತದಾರರಲ್ಲಿ ಭಾನುವಾರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿರುವ ಅಂಜುಮನ್ ಉರ್ದು ಶಾಲೆಯ ಮತದಾನ ಕೇಂದ್ರದಲ್ಲಿ 1119 ಮತದಾರರು ಮತದಾನ ಮಾಡಿದ್ದಾರೆ ಎಂದು ಚುನಾವಣಾಧಿಕಾರಿಯಾಗಿರುವ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ತಿಳಿಸಿದ್ದಾರೆ.
ತುರುಸಿನಿಂದ ಕೂಡಿದ ಚುನಾವಣೆ ಆಗಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತದಾನ ಕೇಂದ್ರದ ಸುತ್ತ 100 ಮೀಟರ್ ಅಂತರದಲ್ಲಿ ನಿರ್ಬಂಧ ಹೇರಲಾಗಿದ್ದು ಇಲ್ಲಿ ವಾಹನ ಸಂಚಾರ ಹಾಗೂ ಪ್ರಚಾರ ಕಾರ್ಯಕ್ಕೆ ನಿಷೇಧ ಹೇರಲಾಗಿತ್ತು. ಶಾಂತಿಯುತವಾಗಿ ನಡೆದ ಮತದಾನದ ಫಲಿತಾಂಶ ರವಿವಾರ ರಾತ್ರಿಯ ವೇಳೆಗೆ ಹೊರಬಿಳಲಿದ್ದು ಸೋಮವಾರ ಸ್ಪಷ್ಟ ಚಿತ್ರಣ ದೊರಕಲಿದೆ.
ಸಹಾಯಕ ಚುನಾವಣಾಧಿಕಾರಿ ತಾಜುದ್ದೀನ್, ಏಣ ಕೆಗೆ ಹೆಚ್ಚುವರಿ ಚುನಾವಣಾಧಿಕಾರಿಯಾಗಿ ದಾಂಡೇಲಿ ವಿಶೇಷ ತಹಶೀಲ್ದಾರ್ ಶೈಲೆಶ್ ಪರಮಾನಂದ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಎಸ್ಆರ್ ದೇಸಾರ ಚುನಾವಣೆ ಕರ್ತವ್ಯ ನಿರ್ವಹಿಸಿದರು.
Leave a Comment