ಹಳಿಯಾಳ:- ವಿದ್ಯಾರ್ಥಿಗಳು, ಯುವ ಸಮುದಾಯ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಹೆಚ್ಚಿನ ಮಹತ್ವ ನಿಡುತ್ತಿರುವುದು ಸರಿಯಿಲ್ಲ ಯುವ ಸಮುದಾಯ ಇದರಿಂದ ಹೊರಬಂದು ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳುವಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ದಾಂಡೇಲಿ ಡಿವೈಎಸ್ಪಿ ಮೋಹನ ಪ್ರಸಾದ ಅಭಿಪ್ರಾಯಿಸಿದರು.
ಪಟ್ಟಣದ ಶಿವಾಜಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪೋಲಿಸ್ ಇಲಾಖೆಯಿಂದ ನಡೆದ ಅಪರಾಧ ತಡೆ ಮಾಸಾಚಾರಣೆ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು.
ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಮಾತನಾಡಿ ಮಕ್ಕಳು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಿಕೊಳ್ಳಬೇಕು. ಕಾನೂನು ತಿಳಿದು ಅದನ್ನು ಪಾಲಿಸುವುದು ಮೊಬೈಲ ಹಾಗೂ ಫೇಸಬುಕ ಇವು ಒಳ್ಳೆಯದಕ್ಕೆ ಮಾತ್ರ ಉಪಯೋಗ ಮಾಡಬೇಕೆಂದ ಅವರು ಅಪರಾಧ ತಡೆಯುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಹಳಿಯಾಳ ಸಿಪಿಆಯ್ ಬಿ.ಎಸ್.ಲೋಕಾಪುರ ಮಾತನಾಡಿ ಮನುಷ್ಯನ ಜೀವನದಲ್ಲಿ ಹುಟ್ಟು-ಸಾವು ಸಾಮಾನ್ಯ ಆದರೆ ಮನುಷ್ಯನ ಜೀವವು ಬಹಳ ಮಹತ್ವದ್ದಾಗಿದ್ದು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಡೆಯಬೇಕು ಹಾಗೂ ಅಪರಾಧ ತಡೆಯ ಕಾನೂನನ್ನು ಪಾಲಿಸಬೇಕು ಎಂದ ಅವರು ವಿದ್ಯಾರ್ಥಿಗಳು ವಾಹನ ಸಂಚಾರ ಮಾಡುವಾಗ ಮೊಬೈಲಗಳನ್ನು ಬಳಸಬಾರದು ವಾಹನಗಳಿಗೆ ಸಂಬಂದಪಟ್ಟ ದಾಖಲಾತಿಗಳನ್ನು ಜೊತೆಗೆ ಇರಿಸಿಕೊಳ್ಳಬೇಕು ಮಾತ್ರವಲ್ಲದೇ ತಲೆಗೆ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿ ಪಾಲಿಸುವಂತರೆ ಕರೆ ನೀಡಿದರು.
ಪಿಎಸ್ಆಯ್ ಆನಂದಮೂರ್ತಿ ಮಾತನಾಡಿ ಸೈಬರ ಕ್ರೈಂ ಮತ್ತು ಫುಡ್ ಕ್ರೈಂ ಮತ್ತು ಆಧಾರ ಕಾರ್ಡನ್ನು ಕೆಲವು ದುಷ್ಕರ್ಮಿಗಳು ದುರ್ಬಳಿಕೆ ಮಾಡಿ ಹಣವನ್ನು ದೋಚುತ್ತಿರುವ ಕುರಿತು ಸಮಗ್ರ ತಿಳುವಳಿಕೆ ನೀಡಿದರು. ಅಲ್ಲದೇ ತಂದೆ-ತಾಯಿ, ಗುರು ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಬಿ.ಮಾನೆ, ಶಿಕ್ಷಕಿ ಸುನಿತಾ ಪಾಟೀಲ, ಜಿ.ಆರ.ಹೆಗಡೆ, ವಿಠ್ಠಲ ಭೂವಿ ಮೊದಲಾದವರು ಇದ್ದರು.
Leave a Comment