ಹಳಿಯಾಳ:- ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ಪ್ರತಿಯೊಂದು ಕುಟುಂಬಕ್ಕೂ ಉಚಿತ ಗ್ಯಾಸ ಸಿಲಿಂಡರ್ ವಿತರಿಸುವ ಯೋಜನೆ ಜಾರಿಗೆ ತರುತ್ತಲೇ ಕರ್ನಾಟಕ ರಾಜ್ಯದಲ್ಲಿ ಅನಿಲ ಭಾಗ್ಯ ಯೋಜನೆಯಡಿ ಗ್ಯಾಸ ಸಿಲಿಂಡರ್ ವಿತರಿಸುತ್ತೇವೆಂದು ಪೈಪೊಟಿ ನಡೆಸಿದ ಆರ್ವಿ ದೇಶಪಾಂಡೆ ಅಜ್ಜನ ಅನಿಲ ಭಾಗ್ಯ ಎಲ್ಲೋಯ್ತು ? ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಖಾರವಾಗಿ ಪ್ರಶ್ನೀಸಿದರು.
ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ನಡೆದ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಗ್ಯಾಸ ಸಿಲೆಂಡರ್ ವಿತರಣೆ ಕಾರ್ಯಕ್ರಮ ಉಧ್ಘಾಟಿಸಿ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಗ್ಯಾಸ ಸಿಲೆಂಡರ್ ವಿತರಿಸಿ ಮಾತನಾಡಿದರು.
ಹಳಿಯಾಳದ- ಜೋಯಿಡಾ ಕ್ಷೇತ್ರದಲ್ಲಿ ಹಲವು ಕಡೆಗಳಲ್ಲಿ ಅರಣ್ಯದಿಂದ ಸುತ್ತುವರಿದ ಗ್ರಾಮಗಳು ಎಂದು ಇಲ್ಲಿಯ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದರೇ ಪ್ರತಿಯೊಂದು ಕುಟುಂಬಕ್ಕೂ ಉಚಿತ ಗ್ಯಾಸ ಸಿಲೆಂಡರ್ ಕನೆಕ್ಷನ್ ಕಲ್ಪಿಸಲಾಗುತ್ತದೆ ಆದರೇ ದೇಶಪಾಂಡೆ ಅವರು ಈ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಹೆಗಡೆ ಆಪಾದಿಸಿದರು.
ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ಹೈಜಾಕ್ ಮಾಡಿರುವ ಸಮ್ಮಿಶ್ರ ಸರ್ಕಾರವು ಇವುಗಳು ತಮ್ಮ ಯೋಜನೆ ಎಂದು ಬಿಂಬಿಸುತ್ತಿವೆ ಅಲ್ಲದೇ ಮೋದಿಜಿ ನೇತೃತ್ವದ ಹಲವಾರು ಉತ್ತಮ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಹಿಂದೆಟು ಹಾಕುತ್ತಿವೆ ಕಾರಣ ಎಂದರೇ ಇದರಿಂದ ಜನರಿಗೆ ಉಪಯೋಗವಾಗಿ ಬಳಿಕ ಮೋದಿಗೆ ಮತ ಹಾಕಬಹುದು ಎನ್ನುವ ದುರಾಲೋಚನೆ ಕಾಂಗ್ರೇಸ್-ಜೆಡಿಎಸ್ ನವರಿಗಿದ್ದು ಜನರಿಗೆ ಕೇಂದ್ರದ ಯೋಜನೆಗಳಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದು ಆಪಾದಿಸಿದ ಅವರು ಆರೋಗ್ಯ ಕಾರ್ಡಗಳನ್ನು ಕೊಡಲು ಸಮ್ಮಿಶ್ರ ಸರ್ಕಾರ ಹಿಂದೆಟು ಹಾಕುತ್ತಿರುವುದು ರಾಜ್ಯದ ಜನರ ದುರ್ದೈವ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಹಾಗೂ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಅನುದಾನ ಮಂಜೂರಿ ಮಾಡುವಂತೆ ಅಹವಾಲು ಸಲ್ಲಿಸಿದರು.
ವೇದಿಕೆಯ ಮೇಲೆ ಮಾಜಿ ಶಾಸಕ ಸುನೀಲ್ ಹೆಗಡೆ, ಊರಿನ ದೇವರಮಣ , ಗಂಗಾಧರ ಗೌಡಾ, ಲಕ್ಷ್ಮೀಬಾಯಿ, ಅಶೋಕ ಮೇಟಿ, ಮುಖಂಡರಾದ ಶಿವಾಜಿ ನರಸಾನಿ, ಗಿರಿಶ ಟೊಸುರ, ಮಂಗೇಶ ದೇಶಪಾಂಡೆ,ಅನಿಲ ಮುತ್ನಾಳ್, ವಿಜಯಕುಮಾರ ಬೋಬಾಟಿ, ಸಂತೋಷ ಘಟಕಾಂಬಳೆ, ಇಂಡಿಯನ್ ಗ್ಯಾಸನ ಚಂದ್ರಕಾಂತ ಅಂಗಡಿ ಮೊದಲಾದವರು ಇದ್ದರು.
Leave a Comment