ಹಳಿಯಾಳ:- ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ದೇವೆಗೌಡರ ಡೊಂಬರಾಟದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ ಹೊರತು ಜನಪರ ಕೆಲಸ ಮಾಡುವ ಸರ್ಕಾರ ಅಸ್ತಿತ್ವದಲ್ಲಿ ಇಲ್ಲ ಎಂದು ಕೇಂದ್ರ ಕೌಶಲ್ಯಾಭೀವೃದ್ದಿ ಸಚಿವ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದರು.
ಬುಧವಾರ ತಾಲೂಕಿನ ಗುಂಡೊಳ್ಳಿ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಮ್ಮೀಶ್ರ ಸರ್ಕಾರ ಅಧಿಕಾರದ ವ್ಯಾಮೋಹದಲ್ಲಿ ಕಾಲ ಕಳೆಯುತ್ತಿದೆ ಹೊರತು ರೈತರ, ಬಡವರ, ದಿನದಲಿತರ ಪರವಾಗಿ ಯಾವುದೇ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿಲ್ಲ ಮಾತ್ರವಲ್ಲದೇ ಕೇಂದ್ರ ಸರ್ಕಾರ ಹಣ ನೀಡುತ್ತೇವೆಂದರೂ ಸಹಿತ ರಾಜ್ಯದಲ್ಲಿ ರೈತರು ಬೆಳೆದ ಬೆಳೆಗಳನ್ನು ಖರಿದಿಸಲು ಬೆಂಬಲ ಬೆಲೆ ಕೇಂದ್ರ ತೆರೆಯದೆ ರೈತರ ಬಗ್ಗೆ ತನ್ನ ಕಾಳಜಿಯನ್ನು ತೊರಿಸುತ್ತಿದೆ ಎಂದರು.
ಕೇಂದ್ರ ಸರ್ಕಾರ ದೂರದ ದೃಷ್ಠಿ ಇಟ್ಟುಕೊಂಡು ಯೋಜನೆಗಳನ್ನು ಜಾರಿಗೊಳಿಸುತ್ತದೆ ಅಲ್ಲದೇ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಅನುದಾನವನ್ನು ನೀಡುತ್ತದೆ ಆದರೇ ಕೇಂದ್ರ ಸರ್ಕಾರದ ಯೋಜನೆಗಳು, ಬಿಡುಗಡೆಯಾದ ಅನುದಾನ ಹಾಗೂ ಕಾಮಗಾರಿಗಳೆಲ್ಲವು ರಾಜ್ಯ ಸರ್ಕಾರದ್ದೇಂದು ಬಿಟ್ಟಿ ಪ್ರಚಾರ ಪಡೆಯುತ್ತಿರುವ ಸಮ್ಮಿಶ್ರ ಸರ್ಕಾರದ ದುರ್ಗತಿ ಬಗ್ಗೆ ಜನರೇ ಅರಿತುಕೊಳ್ಳಬೇಕು. ಪಿಎಮ್ಜಿಎಸ್ವೈನಲ್ಲಿ ನಿರ್ಮಿಸಲಾಗಿದ್ದ ಹಳೆಯ ರಸ್ತೆಗಳ ರಿಪೇರಿಗೆ ಪ್ರತಿ ತಾಲೂಕಿಗೆ 2 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ ಹಾಗೂ ಸಿಆರ್ಎಫ್ನಿಂದ ಜಿಲ್ಲೆಯ ಮುಖ್ಯ ರಸ್ತೆಗಳನ್ನು ನಿರ್ಮಿಸಲು ಅನುದಾನ ನೀಡಿದರೇ ರಾಜ್ಯ ಸರ್ಕಾರ ಅದನ್ನು ವಾಹನ ಖರೀದಿಗೆ ಬಳಸುತ್ತಿರುವುದು ದುರ್ದೈವದ ಸಂಗತಿ ಎಂದರು.
ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ನೂರಾರು ಕೋಟಿ ರೂ. ಅನುದಾನ ನೀಡಲಾಗಿದೆ. ಆದರೇ ಇದರ ಸದುಪಯೋಗವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಕಾಮಗಾರಿಗಳು ಕಳಪೆಯಾಗುತ್ತಿವೆ ಎನ್ನಲಾಗುತ್ತಿದೆ ಅಂದರೇ ಹಿರಿಯ ಸಚಿವ ಆರ್.ವಿ.ದೇಶಪಾಂಡೆ ಅವರ ಅಭಿವೃದ್ದಿ ಕಾರ್ಯಗಳೆಲ್ಲಿ ? ಅವರು ತಮ್ಮ ಬೆಂಬಲಿಗ ಗುತ್ತಿಗೆದಾರರ ಅಭಿವೃದ್ದಿ ಅಷ್ಟೇ ಮಾಡುತ್ತಾರೆಯೇ ಎಂದು ಪ್ರಶ್ನೀಸಿದರು.
ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ಎಲ್ಲ ಕುಟುಂಬಗಳಿಗೆ ಉಚಿತ ಗ್ಯಾಸ ಸಿಲಿಂಡರ್ ಕಿಟ್ಗಳನ್ನು ವಿತರಿಸುತ್ತಿದೆ. ಆಯುಷ್ಮಾನ್ ಭಾರತ ನೂತನ ಯೋಜನೆ ಜಾರಿಗೊಳಿಸಿದೆ. ಅಲ್ಲದೇ ಗ್ರಾಮಾಂತರ ಭಾಗಗಳಲ್ಲಿ ಕೇಂದ್ರ ಸರ್ಕಾರದಿಂದ ಸಿಎಸ್ಆರ್ ಯೋಜನೆಯಡಿ 241 ಕಡೆಗಳಲ್ಲಿ ಡಿಜಿಟಲ್ ಸೇವಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು ಗ್ರಾಮೀಣ ಜನರು ವಿನಾಕಾರಣ ಪಟ್ಟಣಕ್ಕೆ ಅಲೆಯುವುದು ತಪ್ಪಲಿದ್ದು ಗ್ರಾಮಾಂತರ ಭಾಗದಲ್ಲೇ ಸೇವೆಗಳು ಲಭ್ಯವಾಗಲಿವೆ ಎಂದರು.
ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ ಕೇಂದ್ರ ಸಚಿವರ ಕಾರ್ಯಗಳನ್ನು ವಿವರಿಸಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಭೀವೃದ್ದಿಯಲ್ಲಿ ಕ್ಷೀಪ್ರ ಕ್ರಾಂತಿಯನ್ನು ಮಾಡುತ್ತಿದೆ. ಇಡಿ ಜಗತ್ತೇ ಮೊದಿಜಿಯವರ ಕಾರ್ಯವೈಖರಿಯನ್ನು ಮೆಚ್ಚಿ ಹೊಗಳುತ್ತಿದೆ ಎಂದರು. ಇನ್ನೂ ಹಳಿಯಾಳ ಭಾಗದಲ್ಲಿ ಕಾಳಿನದಿ ಏತ ನೀರಾವರಿ ಯೋಜನೆ ಹಾಗೂ ಶುದ್ದ ಕುಡಿಯುವ ನೀರಿನ ಘಟಕಗಳು ನೆನೆಗುದಿಗೆ ಬಿದ್ದಿವೆ ಇದನ್ನು ಸ್ವತಃ ಎಮ್.ಎಲ್.ಸಿ. ಘೊಟ್ನೇಕರ ಅವರೇ ಕೆಡಿಪಿ ಸಭೆಯಲ್ಲಿ ಒಪ್ಪಿಕೊಂಡಿದ್ದು ಸಚಿವ ದೇಶಪಾಂಡೆ ಅವರು ಜನರಿಗೆ ಉತ್ತರ ನೀಡಬೇಕಿದೆ ಎಂದರು.
ವೇದಿಕೆಯಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ಮಂಗೇಶ ದೇಶಪಾಂಡೆ, ವಿಎಮ್ ಪಾಟೀಲ್, ಜಯಲಕ್ಷ್ಮೀ ಚವ್ವಾನ, ಗಿರಿಶ ಟೊಸುರ, ಸಿದ್ದಪ್ಪಾ ದಲಾಲ, ಅನಿಲ ಮುತ್ನಾಳ್, ಅಜೋಬಾ ಕರಂಜೆಕರ, ಸುಭಾಷ ಕಾಮ್ರೇಕರ, ಮಾರುತಿ ಇದ್ದರು.
Leave a Comment