• Skip to content
  • Skip to secondary menu
  • Skip to primary sidebar
  • Home
  • Business Directory
    • Add Listing
  • JOBS
  • Telecom offers
  • Entertainment
  • Sports
  • Contact Numbers

Canara Buzz

Daily Updated Canara News

  • Honavar
  • Kumta
  • Ankola
  • Bhatkal
  • Karwar
  • Sirsi
  • Siddapura
  • Haliyal

ಸಮಯಕ್ಕೆ ಸರಿಯಾಗಿ ಕಾಳಿನದಿ ನೀರಾವರಿ ಯೋಜನೆ ಜಾರಿಯಾಗದಿದ್ದರೇ ಮತದಾರರು ಕಲ್ಲಲ್ಲಿ ಹೊಡಿತಾರೇ – ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ‌.

December 7, 2018 by yogaraj sk Leave a Comment

KDP sabhe - by SL ghotnekar

ಹಳಿಯಾಳ:- ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಕಾಳಿ ನದಿ ನೀರಾವರಿ ಯೋಜನೆ ಜಾರಿಯ ಕುರಿತು ಭರವಸೆ ನೀಡಲಾಗಿದೆ. ಸಮಯಕ್ಕೆ ಸರಿಯಾಗಿ ಯೋಜನೆ ಜಾರಿಯಾಗದಿದ್ದರೇ ಮತದಾರರು ನಮಗೆ ಕಲ್ಲು ಹೊಡೆಯುತ್ತಾರೆ ಎಂದಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಕಾಮಗರಿಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯತೊರುತ್ತಿದ್ದಾರೆಂದು ಅಧಿಕಾರಿಗಳನ್ನು ಹಿಗ್ಗಮುಗ್ಗಾ ತರಾಟೆಗೆ ತೆಗೆದುಕೊಂಡ ವಿದ್ಯಮಾನ ನಡೆಯಿತು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ(ಕೆಡಿಪಿ) ಸಭೆಯಲ್ಲಿ ಸಚಿವ ಆರ್.ವಿ.ದೇಶಪಾಂಡೆ ಅನುಪಸ್ಥಿತಿಯಲ್ಲಿ ಸಭೆ ತೆಗೆದುಕೊಂಡ ವಿಪ ಸದಸ್ಯರು ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.
ಸಭೆಯಲ್ಲಿ ಕಾಳಿನದಿ ನೀರಾವರಿ ಯೋಜನೆ ವಿಷಯ ಪ್ರಸ್ಥಾಪ ಮಾಡುತ್ತಿದ್ದಂತೆ ಕಾಮಗಾರಿಯು ಗುಣಮಟ್ಟದ್ದಾಗಿ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದಿದ್ದರೆ ಮತದಾರರು ನಮಗೆ ಕಲ್ಲು ಹೊಡೆಯುತ್ತಾರೆ. ಈ ಬಗ್ಗೆ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದು ಏಕೆ ಎಂದು ಪ್ರಶ್ನೀಸಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಮತ್ತು ಸಹಾಯಕ ಇಂಜಿನಿಯರ ಎಂ. ಮಹೇಶಕುಮಾರರನ್ನು ತರಾಟೆಗೆ ತೆಗೆದುಕೊಂಡರು. ಜನವರಿ 1 ರಿಂದ ಪೈಪ್ ಲೈನ್ ಅಳವಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಗ್ರಾಮ ಪಂಚಾಯತ ಮಟ್ಟದಲ್ಲಿ ಸರ್ಕಾದ ಯೂಜನೆಯಡಿಯಲ್ಲಿ ವಿವಿಧ ಕಾಮಗಾರಿಗಳು ಪೂರ್ಣಗೊಂಡಿರುವ ಕುರಿತು ಗುತ್ತಿಗೆದಾರರಿಗೆ ಪ್ರಗತಿಯಾದ ಸ್ಥಳದಲ್ಲಿ ಅಂದಾಜು ಮೊತ್ತದ ಫಲಕವನ್ನು ಅಳವಡಿಸಬೇಕು ಮತ್ತು ಇನ್ನುಳಿದ ಕಾಮಗಾರಿಗಳನ್ನು ಕೂಡಲೆ ಕಾರ್ಯರೂಪಕ್ಕೆ ತರಬೇಕು. ಸರ್ಕಾರದಿಂದ ಕಾಮಗಾರಿಗಳಿಗೆ ಬೀಡುಗಡೆಯಾದ ಅನುದಾನವನ್ನು ಸರಿಯಾದ ಸಮಯಕ್ಕೆ ಉಪಯೋಗಿಸಬೇಕು ಹಾಗೂ ಒಂದು ವೇಳೆ ಸರ್ಕಾರದ ಅನುದಾನವು ಸರಿಯಾಗಿ ಬಳಕೆ ಮಾಡದೆ ಇದ್ದಲ್ಲಿ ಅಧಿಕಾರಿಗಳೆ ಜವಾಬ್ದಾರಿ ಎಂದರು.
ಹಳಿಯಾಳ ಪೋಲಿಸ್ ಇಲಾಖೆಯವರು ದ್ವಿಚಕ್ರÀ ವಾಹನದವರಿಗೆ ಹೆಲ್ಮೆಟ್ ಧರಿಸುವಂತೆ ಹಾಗೂ ತ್ರಿಬಲ್ ರೈಡಿಂಗ್, ಮಧ್ಯಪಾನ ಸೇವನೆ ಮಾಡಿ ವಾಹನ ಚಲಾಯಿಸುವವರ ವಿರುದ್ದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಹಳಿಯಾಳ ಪಟ್ಟಣದಲ್ಲಿ ನಿವೇಶನಗಳಿಗೆ ಬಹಳಷ್ಟು ಬೇಡಿಕೆಯಿದ್ದು ಗ್ರಾಹಕರು ಯಾವುದೇ ನಿವೇಶನ ಖರೀದಿಸುವ ಮುನ್ನ ಸರಿಯಾಗಿ ಮಾಹಿತಿ ಪಡೆಯಬೇಕು ಹಾಗೂ ಅಭಿವೃದ್ದಿ ಪಡಿಸದ ಜಮೀನುಗಳಿಗೆ ಎನ್‍ಎ ಅನುಮತಿ ನೀಡದಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯತ ಉಪಾಧ್ಯಾಕ್ಷ ಸಂತೋಷ ರೇಣೆಕೆ, ಸದಸ್ಯರಾದ ಕೃಷ್ಣಾ ಪಾಟೀಲ, ಮಹೇಶ್ರಿ ಸಂಜು ಮಿಶಾಳೆ, ಲಕ್ಷ್ಮೀ ಕೊರ್ವೆಕರ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ನೀಲವ್ವ ಮಡಿವಾಳ, ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ|| ಮಹೇಶ ಕುರಿಯವರ, ತಹಶೀಲ್ದಾರ ವಿದ್ಯಾಧರ ಗುಳಗುಳೆ ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related

Filed Under: Haliyal news, Local News Tagged With: ಅನುಪಸ್ಥಿತಿಯಲ್ಲಿ ಸಭೆ, ಅಭಿವೃದ್ದಿ ಪಡಿಸದ ಜಮೀನು, ಕಲ್ಲಲ್ಲಿ ಹೊಡಿತಾರೇ, ಕಾಳಿ ನದಿ ನೀರಾವರಿ  ಯೋಜನೆ, ಕಾಳಿನದಿ ನೀರಾವರಿ ಯೋಜನೆ, ಗುಣಮಟ್ಟದ್ದಾಗಿ ಸಮಯ, ಚುನಾವಣೆ ಸಂದರ್ಭ, ಜಾರಿಯಾಗದಿದ್ದರೇ ಮತದಾರರು, ತ್ರಿಬಲ್ ರೈಡಿಂಗ್, ನಿವೇಶನ ಖರೀದಿಸುವ ಮುನ್ನ, ಪಟ್ಟಣದ ಮಿನಿ ವಿಧಾನಸೌಧ, ಪೈಪ್ ಲೈನ್ ಅಳವಡಿಸುವುದಾಗಿ ಅಧಿಕಾರಿಗಳು ಭರವಸೆ, ಮಧ್ಯಪಾನ ಸೇವನೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೆಕರ, ಸಮಯಕ್ಕೆ ಸರಿಯಾಗಿ, ಸರಿಯಾಗಿ ಮಾಹಿತಿ ಪಡೆಯಬೇಕು, ಹೆಲ್ಮೆಟ್ ಧರಿಸುವಂತೆ

yogaraj sk

About yogaraj sk

Reader Interactions

Leave a Reply Cancel reply

Primary Sidebar

Thousands of people visit Canara Buzz everyday. You can advertise on our website at affordable prices starting from just ₹1000. Write to [email protected] with your details and we will call you back.

© 2019 Canara Buzz · Privacy Policy · Disclaimer · Terms & Conditions · Hosted by WPfog

loading Cancel
Post was not sent - check your email addresses!
Email check failed, please try again
Sorry, your blog cannot share posts by email.