ಹಳಿಯಾಳ:- ಹಳಿಯಾಳ ತಾಲೂಕ ವಾರಕರಿ ಸಂಘ ಹಾಗೂ ಸದ್ಬಕ್ತರ ಆಶ್ರಯದಲ್ಲಿ 31ನೇ ವರ್ಷದ ಪಂಡರಪೂರ ಪಾದಯಾತ್ರೆಯ ಸಾಧನಾ ಫಲವಾಗಿ ಪಟ್ಟಣದ ಬೆಳಗಾಂವ ರಸ್ತೆಯಲ್ಲಿರುವ ಗಣೇಶ ನಗರ(ಗುತ್ತಿಗೇರಿ)ಯಲ್ಲಿ ನಿರ್ಮಿಸಿದ ಮಂದಿರದಲ್ಲಿ ಜ್ಞಾನೇಶ್ವರಿ ಪಾರಾಯಣ ಸೋಹಳಾ ಹಾಗೂ ಶ್ರೀ ಜ್ಞಾನೇಶ್ವರ, ಶ್ರೀ ಸಿದ್ದೇಶ್ವರ ಹಾಗೂ ಶ್ರೀ ವಿಠ್ಠಲ ರುಕುಮಾಯಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ದಿ.10 ರಿಂದ 17ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.
8 ದಿನಗಳ ಕಾಲ ನಡೆಯಲಿರುವ ಈ ಆಧ್ಯಾತ್ಮೀಕ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಸಂತರು ಸಾಕ್ಷೀಯಾಗಲಿದ್ದು ಬೃಹತ್ ಪೆಂಡಾಲಗಳನ್ನು ಹಾಗೂ ಸಾಧು-ಸಂತರು- ಭಕ್ತರಿಗೆ ಸಕಲ ರೀತಿಯ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು ಕಾರ್ಯಕ್ರಮದ ತಯಾರಿ ಭರದಿಂದ ಸಾಗಿದೆ.
ಮಹಾರಾಷ್ಟ್ರದ ಪ್ರಸಿದ್ದ ಸುಕ್ಷೇತ್ರ ಪಂಡರಪೂರದ ಗುರುವರ್ಯ ಹಬಪ ಕೌಸ್ತಬ(ರಾಹು) ವಿವೇಕಾನಂದ ವಾಸ್ಕರ ಹಾಗೂ ಗುರುವರ್ಯ ಹಬಪ ದೇವವೃತ(ರಾನು) ವಿವೇಕಾನಂದ ವಾಸ್ಕರ ಮಹಾರಾಜರ ಆದಿಷ್ಠಾನದಲ್ಲಿ ಸತತ 7 ದಿನಗಳ ಕಾಲ ಸಾಮೂಹಿಕ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ-ಸೊಹಳಾ ನಡೆಯಲಿದೆ ಎಂದು ಉತ್ಸವ ಸಮೀತಿಯ ಗಂಗಾರಾಮ ಮೋಗ್ರಿ, ಕೆ.ಆರ್.ಬೋಗುರಕರ, ದೇಮಾನಿ ಮಡಿವಾಳ, ವಿಠ್ಠಲ ಚಲವಾದಿ, ರಾಜೇಂದ್ರ ರೇವಣಕರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೋಮವಾರ ದಿ.10ರಂದು ಮಧ್ಯಾಹ್ನ 2 ಗಂಟೆಗೆ ಹಳಿಯಾಳ ನಗರದಲ್ಲಿ ಶ್ರೀ ಜ್ಞಾನೇಶ್ವರ, ಶ್ರೀ ಸಿದ್ದೇಶ್ವರ ಹಾಗೂ ಶ್ರೀ ವಿಠ್ಠಲ ರುಕುಮಾಯಿ ಮೂರ್ತಿಗಳ ಮೇರವಣ ಗೆ ಹಾಗೂ ನಗರ ಪ್ರದಕ್ಷಿಣೆ ನಡೆಯಲಿದೆ. ದಿ.11 ರಿಂದ ವ್ಯಾಸಪೀಠ ಚಾಲಕರಾದ ಹಬಪ ಬಂಡು(ಅಪ್ಪಾ) ಸಾವಂತ ಆಳಂದಿ ಮತ್ತು ಹಬಪ ಅವಧೂತ ಲಕ್ಷ್ಮಣ ಕಡತಾರೆ ಕೊಲ್ಹಾಪುರ ಉಪಸ್ಥಿತಿಯಲ್ಲಿ 7 ದಿನಗಳ ಕಾಲ ಪಾರಾಯಣ ನಡೆಯಲಿದ್ದು ಪ್ರತಿದಿನ ಜಾಗರಣೆಯೊಂದಿಗೆ ನಿರಂತರ ಕಾರ್ಯಕ್ರಮ ನಡೆಯಲಿರುವುದು ವಿಶೇಷವಾಗಿದೆ.
ದಿ.11 ರಂದು ಆಧಿಶಕ್ತಿ ಪಿಠದ ಕೃಷ್ಣಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ಹಾಗೂ ಪುಂಡ್ಲಿಕ್ ಬೆಣಚಮರಡಿಯಿಂದ ಕೀರ್ತನೆ. ದಿ.12 ರಂದು ಹಂಡಿಬಡಂಗನಾಥ ಮಠದ ಸಿದ್ದಹಂಡಿ ಬಡಂಗನಾಥ ಪ್ರಕರನಾಥಜೀಯಿಂದ ಆಶೀವರ್ಚನ, ಯಲ್ಲಪ್ಪಾ ಗಿರಿಮಲ್-ಕೀರ್ತನೆ. ದಿ.13 ರಂದು ಮಲ್ಲಾಪೂರಮಠದ ಎಮ್.ಎನ್.ತಳವಾರ ಉಪನ್ಯಾಸ-ನಾಮದೇವ ಸಾಕತಕರ ಕೀರ್ತನೆ.
ದಿ.14 ನಿತ್ಯಾನಂದ ಆಶ್ರಮ ಕೆಕೆ ಹಳ್ಳಿಯ ಸುಬ್ರಮಣ್ಯ ಸ್ವಾಮೀಜಿಯಿಂದ ಧಾರ್ಮಿಕ ಚಿಂತನೆ ಮತ್ತು ಆಶೀರ್ವಚನ- ರಾಜೂ ಜರೇಕರ –ಕೀರ್ತನೆ. ದಿ.15- ಆಧ್ಯಾತ್ಮೀಕ ಚಿಂತಕರು ಹಾಗೂ ವನವಾಸಿ ಕಲ್ಯಾಣ ಸಂಸ್ಥೆಯ ಸದಸ್ಯರಾದ ಕೃಷ್ಣಮೂರ್ತಿಯವರಿಂದ ದೇಶ ಭಕ್ತಿ ಹಾಗೂ ಯುವಕರಿಗೆ ಮಾರ್ಗದರ್ಶನ –ಆನಂದ ಜಾಧವ-ಕೀರ್ತನೆ. ದಿ.16 ರಂದು ಬೆಂಗಳೂರಿನ ಗೋಸಾವಿ ಮಠದ ಜಗದ್ಗುರು ಮಂಜುನಾಥ ಸ್ವಾಮೀಜಿ ಹಾಗೂ ಉಪ್ಪಿನ ಬೆಟಗೇರಿಯ ವಿರುಪಾಕ್ಷ ಸ್ವಾಮೀಜಿಯಿಂದ ಧಾರ್ಮಿಕ ಚಿಂತನೆ ಹಾಗೂ ವಿಠ್ಠಲ ಪಾಟೀಲ್-ಕಿರ್ತನೆ ಕೊನೆಯ ದಿನ ದಿ.17 ಸೋಮವಾರದಂದು ಶ್ರೀ ಜ್ಞಾನೇಶ್ವರ, ಶ್ರೀ ಸಿದ್ದೇಶ್ವರ ಹಾಗೂ ಶ್ರೀ ವಿಠ್ಠಲ ರುಕುಮಾಯಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಬಳಿಕ ಕಾಲಾ ಕಿರ್ತನ ನಂತರ ಮಹಾಪ್ರಸಾದ ಕಾರ್ಯಕ್ರಮದ ನಂತರ 8 ದಿನಗಳ ಕಾರ್ಯಕ್ರಮಕ್ಕೆ ತೆರೆಬಿಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
Leave a Comment