ಹಳಿಯಾಳ:- ಭಾರತ ಸರ್ಕಾರದ ಕೈಗಾರಿಕಾ ನೀತಿ ಹಾಗೂ ಪ್ರೇರೇಪಣಾ ಇಲಾಖೆಯ ಯೋಜನೆಯಾದ “ಸ್ಟಾರ್ಟ್ಅಪ್ ಇಂಡಿಯಾ, ಕರ್ನಾಟಕ ಯಾತ್ರಾ”ದ ಸಂಚಾರಿ ವಾಹನ
ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಲ್ಲಿ ಅಡಗಿರುವ ಔದ್ಯಮಿಕ ಹಾಗೂ ತಾಂತ್ರಿಕ ಕೌಶಲ್ಯಗಳಿಗೆ ವೇದಿಕೆ ಒದಗಿಸುವುದು ಮತ್ತು ನವೀನ ಉದ್ಯಮ ಸ್ಥಾಪನೆಯನ್ನು ಪ್ರೇರೇಪಿಸುವದು ಈ ಯಾತ್ರೆಯ ಉದ್ದೇಶವಾಗಿದೆ ಎಂದು ಯಾತ್ರೆಯ ಪ್ರಮುಖರಾದ ಕರಣ್ದೀಪ್ ಸಿಂಗ್ ತಿಳಿಸಿ ಉದ್ಯಮ ಸ್ಥಾಪನೆಗೆ ಇರುವ ಅವಕಾಶಗಳು ಮತ್ತು ಅದಕ್ಕೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ನ ಸ್ಯಾಂಡ್ಬಾಕ್ಸ್ ಸ್ಟಾಟ್ಅಪ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಿರುವ ಉದ್ಯಮಶೀಲ ಅವಕಾಶಗಳ ಕುರಿತು ಆಯೋಜಿಸಿರುವ ತರಬೇತಿ ಕಾರ್ಯಕ್ರಮ “ಬೂತ್ ಕ್ಯಾಂಪ್”ನ ಕುರಿತು ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೂತ್ ಕ್ಯಾಂಪ್ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡರು. ಡಾ|| ಕೆ ಎಸ್ ಪೂಜಾರ್, ಡಾ|| ಅರುಣ ಕಾಖಂಡಕಿ ಮತ್ತು ಉಮೇಶ ಎ ಹಾಗೂ ಪ್ರಾಂಶುಪಾಲರಾದ ಡಾ|| ವಿ ವಿ ಕಟ್ಟಿಯ ಇದ್ದರು.
Leave a Comment