ಹಳಿಯಾಳ: ಹಳಿಯಾಳ ತಾಲೂಕ ವಾರಕರಿ ಸಂಘ ಹಾಗೂ ಸದ್ಬಕ್ತರ ಆಶ್ರಯದಲ್ಲಿ 31ನೇ ವರ್ಷದ ಪಂಡರಪೂರ ಪಾದಯಾತ್ರೆಯ ಸಾಧನಾ ಫಲವಾಗಿ ಪಟ್ಟಣದ ಬೆಳಗಾಂವ ರಸ್ತೆಯಲ್ಲಿರುವ ಗಣೇಶ ನಗರ(ಗುತ್ತಿಗೇರಿ)ಯಲ್ಲಿ ನಿರ್ಮಿಸಿದ ಮಂದಿರದಲ್ಲಿ ಜ್ಞಾನೇಶ್ವರಿ ಪಾರಾಯಣ ಸೋಹಳಾ ಹಾಗೂ ಶ್ರೀ ಜ್ಞಾನೇಶ್ವರ, ಶ್ರೀ ಸಿದ್ದೇಶ್ವರ ಹಾಗೂ ಶ್ರೀ ವಿಠ್ಠಲ ರುಕುಮಾಯಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ನಡೆಯುತ್ತಿದೆ.
ದಿ.17ರ ವರೆಗೆ ನಡೆಯಲಿರುವ ಆಧ್ಯಾತ್ಮೀಕ ಕಾರ್ಯಕ್ರಮದ ಅಂಗವಾಗಿ ಪಟ್ಟಣದಲ್ಲಿ ಉತ್ಸವ ಮೂರ್ತಿಗಳ ಭವ್ಯ ಮೆರವಣ ಗೆಯನ್ನು ವಾರಕರಿಗಳ ಕಿರ್ತನೆ ಹಾಗೂ ಭಜನೆಯ ಮೂಲಕ ನಗರದ ಮುಖ್ಯ ಬೀದಿಗಳಲ್ಲಿ ನಡೆಸಲಾಯಿತು.
ಈ ಉತ್ಸವದಲ್ಲಿ ದೇವರ ವಿವಿಧ ಧಾರ್ಮೀಕ ಕಾರ್ಯಕ್ರಮಗಳು ಪಾರಾಯಣ, ಕಿರ್ತನೆಗಳು, ಮೂರ್ತಿ ಪ್ರತಿಷ್ಠಾಪನೆಗಳು, ಆದ್ಯಾತ್ಮಕ ಚಿಂತಕರಿಂದ ಪ್ರವಚನಗಳು, ಉಪನ್ಯಾಸ ಕಾರ್ಯಕ್ರಮ, ಹಾಗೂ ಕಾಲಾ ಕಿರ್ತನೆ, ಮಹಾ ಪ್ರಸಾದ ನೆರವೆರಲಿದೆ ಎಂದು ಉತ್ಸವ ಸಮೀತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಆದಿ ಶಕ್ತಿ ಪೀಠದ ಕೃಷ್ಣಾನಂದ ಸ್ವಾಮಿ, ಕೆಕೆ ಹಳ್ಳಿ ಮಠದ ಸುಬ್ರಮಣ್ಯ ಸ್ವಾಮಿ, ಹಂಡಿಭಡಂಗನಾಥ ಮಠದ ಪ್ರಕರನಾಥಜೀ ಮಹಾರಾಜರು, ಗೋಸಾವಿ ಮಠದ ಜಗದ್ಗುರು ಮಂಜುನಾಥ ಮಹಾರಾಜರು, ಭಕ್ತಾಧಿಗಳಿಗೆ ಆದ್ಯಾತ್ಮದ ಪ್ರವಚನ ಹಾಗೂ ಕಾರ್ಯಕ್ರಮಕ್ಕೆ ಆಶೀರ್ವದಿಸಲಿದ್ದಾರೆ.
Leave a Comment