ಹಳಿಯಾಳ: ಮಹಿಳೆ ಸಾಮಾಜಿಕ, ಶೈಕ್ಷಣ ಕ, ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸುವ ಮೂಲಕ ಉದ್ಯಮಶೀಲ ಮಹಿಳೆಯಾಗಬೇಕು ಎಂದು ಚೆರಿಶ್ ಸಂಸ್ಥೆಯ ನಿರ್ದೇಶಕಿ ರೇಣು ಮುಕುಂದ ಕರೆ ನೀಡಿದರು.
ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯಡಿ ಹಳಿಯಾಳ ತಾಲೂಕಿನ ಹುನ್ಸವಾಡ ಗ್ರಾಮದಲ್ಲಿ ಮಹಿಳೆಯರಿಗಾಗಿ 10 ದಿನಗಳ ಬಟ್ಟೆ ಬ್ಯಾಗ್ಗಳ ತಯಾರಿಕೆ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ ಅವರು ಮಹಿಳೆಯರು ಆತ್ಮಾಭಿಮಾನ ಮತ್ತು ಸ್ವಾಭಿಮಾನ ಬದುಕು ಸಾಗಿಸಬೇಕು. ಪುರುಷರ ಜೊತೆ ಸಮಾನ ಹೆಜ್ಜೆ ಇಟ್ಟು ತನ್ನ ಕುಟುಂಬದ ನಿರ್ವಹಣೆಯಲ್ಲಿ ಸಮಭಾಗಿಯಾಗಿ ಯಶಸ್ಸಿನ ದಾರಿಯಲ್ಲಿ ಸಾಗಬೇಕು ಎಂದರು.
ಗ್ರಾಮ ಪಂಚಾಯತ ಸದಸ್ಯ ಮಂಜುನಾಥ ರೇಡೆಕರ್ ಕೆನರಾಬ್ಯಾಂಕ ದೇಶಪಾಂಡೆ ಆರ್ಸೆಟ್ ಸಂಸ್ಥೆಯ ಸಾಮಾಜಿಕ ಕಾರ್ಯವನ್ನು ಶ್ಲಾಘಿಸಿದರು.
ಸಂಸ್ಥೆಯ ನಿರ್ದೇಶಕ ನಿತ್ಯಾನಂದ ವೈದ್ಯ ಮಾತನಾಡಿ ಮಹಿಳೆಯರು ತರಬೇತಿಗಳ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಆಯ್ದುಕೊಂಡ ವೃತ್ತಿ ಪ್ರೀತಿಸಿ ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದರು.
ಕೃತಕ ಹೂವುಗಳು, ಗ್ರೀಟಿಂಗ್ಸ್ ಹಾಗೂ ಗೊಂಬೆ ತಯಾರಿಕೆ ತರಬೇತಿ :- ಸ್ವ ಸಹಾಯ ಸಂಘದ ಸದಸ್ಯರುಗಳಿಗಾಗಿ ಆದಾಯದಾಯಕ ಚಟುವಟಿಕೆಯ ಆಧಾರಿತ ಒಂದು ವಾರದ ಕೃತಕ ಹೂವುಗಳು, ಗ್ರೀಟಿಂಗ್ಸ್ ಹಾಗೂ ಗೊಂಬೆ ತಯಾರಿಕೆ ತರಬೇತಿಯನ್ನು ತೇರಗಾಂವ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು. ತೇರಗಾಂವ ಗ್ರಾ.ಪಂ ಅಧ್ಯಕ್ಷೆ ಸುನಿತಾ ತರಬೇತಿಯನ್ನು ಉದ್ಘಾಟಿಸಿದರು.
ಕೆನರಾಬ್ಯಾಂಕ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ನಿರ್ದೇಶಕ ನಿತ್ಯಾನಂದ ಆರ್ ವೈದ್ಯ ಮಾತನಾಡಿ ಇಂದಿನ ದಿನಗಳಲ್ಲಿ ಕ್ರಾಪ್ಟ್ ಮತ್ತು ಗೊಂಬೆಗಳಿಗೆ ಸಾಕಷ್ಟೂ ಬೇಡಿಕೆ ಇದೆ. ಇದನ್ನು ಉಪಯೋಗಿಸಿ ಮನೆಯಲ್ಲಿಯೇ ಕುಳಿತು ಉದ್ಯೋಗವನ್ನು ಮಾಡಲು ಅವಕಾಶವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ, ಗ್ರಾ.ಪಂ ಸದಸ್ಯ ವಿಜಯ ಘಾಟಕೆ, ಅನಿತಾ ಪಾಟೀಲ, ಸಂತೋಷ ಪರಿಟ, ವಿಷ್ಣು ಮಡಿವಾಳ, ಸುರೇಶ ಗಾವಡೆ ಇದ್ದರು.
Leave a Comment