ಹಳಿಯಾಳ:- ಪಟ್ಟಣದ ಗಣೇಶ ನಗರ(ಗುತ್ತಿಗೇರಿ)ದಲ್ಲಿ ನಡೆಯುತ್ತಿರುವ ಸಾಮೂಹಿಕ ಗ್ರಂಥರಾಜ ಜ್ಞಾನೇಶ್ವರಿ ಮತ್ತು ಮಂಚರಿಗಾಥಾ ಪಾರಾಯಣ-ಸೊಹಳಾ 4 ದಿನ ಪೂರೈಸಿದ್ದು ಶನಿವಾರ 5ನೇ ದಿನಕ್ಕೆ ಪಾದಾರ್ಪಣೆ ಮಾಡಲಿದ್ದು ಅತ್ಯಂತ ಶೃದ್ದಾಭಕ್ತಿಯಿಂದ ನಡೆಯುತ್ತಿರುವ ಕಾರ್ಯಕ್ರಮಕ್ಕೆ ತಾಲೂಕು, ಜಿಲ್ಲೆ ಮಾತ್ರವಲ್ಲದೇ ರಾಜ್ಯ, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿರುವುದು ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಮೆರಗು ತಂದಿದೆ.
ಹಳಿಯಾಳ ತಾಲೂಕ ವಾರಕರಿ ಸಂಘ ಹಾಗೂ ಸದ್ಬಕ್ತರ ಆಶ್ರಯದಲ್ಲಿ 31ನೇ ವರ್ಷದ ಪಂಡರಪೂರ ಪಾದಯಾತ್ರೆಯ ಸಾಧನಾ ಫಲವಾಗಿ ಪಟ್ಟಣದ ಬೆಳಗಾಂವ ರಸ್ತೆಯಲ್ಲಿರುವ ಗಣೇಶ ನಗರ(ಗುತ್ತಿಗೇರಿ)ಯಲ್ಲಿ ನಿರ್ಮಿಸಿದ ಮಂದಿರದಲ್ಲಿ ಜ್ಞಾನೇಶ್ವರಿ ಪಾರಾಯಣ ಸೋಹಳಾ ಹಾಗೂ ಶ್ರೀ ಜ್ಞಾನೇಶ್ವರ, ಶ್ರೀ ಸಿದ್ದೇಶ್ವರ ಹಾಗೂ ಶ್ರೀ ವಿಠ್ಠಲ ರುಕುಮಾಯಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ದಿ.10ಕ್ಕೆ ಪ್ರಾರಂಭವಾಗಿದ್ದು ದಿ.17ರ ವರೆಗೆ ನಡೆಯಲಿದೆ.
8 ದಿನಗಳ ಕಾಲ ನಡೆಯಲಿರುವ ಈ ಆಧ್ಯಾತ್ಮೀಕ ಕಾರ್ಯಕ್ರಮಕ್ಕೆ ಸ್ವಾಮೀಜಿಗಳು, ಸಾಧು-ಸಂತರು ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ವ್ಯಾಸಪೀಠ ಚಾಲಕರಾದ ಹಬಪ ಬಂಡು(ಅಪ್ಪಾ) ಸಾವಂತ ಆಳಂದಿ ಮತ್ತು ಹಬಪ ಅವಧೂತ ಲಕ್ಷ್ಮಣ ಕಡತಾರೆ ಕೊಲ್ಹಾಪುರ ಉಪಸ್ಥಿತಿಯಲ್ಲಿ ಪ್ರತಿದಿನ ಜಾಗರಣೆಯೊಂದಿಗೆ ಹಗಲು ರಾತ್ರಿಯೆನ್ನದೆ ನಿರಂತರ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷವಾಗಿದೆ.
ದಿ.13 ರಂದು ಮಲ್ಲಾಪೂರಮಠದ ಎಮ್.ಎನ್.ತಳವಾರ ಉಪನ್ಯಾಸ ನೀಡಿದ್ದು ನಾಮದೇವ ಸಾಕತಕರವರು ಕೀರ್ತನೆ ನಡೆಸಿಕೊಟ್ಟಿದ್ದು ಶುಕ್ರವಾರ ದಿ.14ರಂದು ನಿತ್ಯಾನಂದ ಆಶ್ರಮ ಕೆಕೆ ಹಳ್ಳಿಯ ಸುಬ್ರಮಣ್ಯ ಸ್ವಾಮೀಜಿಯಿಂದ ಧಾರ್ಮಿಕ ಚಿಂತನೆ ಮತ್ತು ಆಶೀರ್ವಚನ ಕಾರ್ಯಕ್ರಮ ನಡೆಯಿತು. ರಾಜೂ ಜರೇಕರ ಕೀರ್ತನೆ ನಡೆಸಿಕೊಟ್ಟರು.
ದಿ.15- ಆಧ್ಯಾತ್ಮೀಕ ಚಿಂತಕರು ಹಾಗೂ ವನವಾಸಿ ಕಲ್ಯಾಣ ಸಂಸ್ಥೆಯ ಸದಸ್ಯರಾದ ಕೃಷ್ಣಮೂರ್ತಿಯವರಿಂದ ದೇಶ ಭಕ್ತಿ ಹಾಗೂ ಯುವಕರಿಗೆ ಮಾರ್ಗದರ್ಶನ –ಆನಂದ ಜಾಧವ-ಕೀರ್ತನೆ. ದಿ.16 ರಂದು ಬೆಂಗಳೂರಿನ ಗೋಸಾವಿ ಮಠದ ಜಗದ್ಗುರು ಮಂಜುನಾಥ ಸ್ವಾಮೀಜಿ ಹಾಗೂ ಉಪ್ಪಿನ ಬೆಟಗೇರಿಯ ವಿರುಪಾಕ್ಷ ಸ್ವಾಮೀಜಿಯಿಂದ ಧಾರ್ಮಿಕ ಚಿಂತನೆ ಹಾಗೂ ವಿಠ್ಠಲ ಪಾಟೀಲ್-ಕಿರ್ತನೆ ಕೊನೆಯ ದಿನ ದಿ.17 ಸೋಮವಾರದಂದು ಶ್ರೀ ಜ್ಞಾನೇಶ್ವರ, ಶ್ರೀ ಸಿದ್ದೇಶ್ವರ ಹಾಗೂ ಶ್ರೀ ವಿಠ್ಠಲ ರುಕುಮಾಯಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಬಳಿಕ ಕಾಲಾ ಕಿರ್ತನ ನಂತರ ಮಹಾಪ್ರಸಾದ ಕಾರ್ಯಕ್ರಮದ ನಂತರ 8 ದಿನಗಳ ಕಾರ್ಯಕ್ರಮಕ್ಕೆ ತೆರೆಬಿಳಲಿದೆ ಎಂದು ಉತ್ಸವ ಸಮೀತಿಯ ಗಂಗಾರಾಮ ಮೋಗ್ರಿ, ಕೆ.ಆರ್.ಬೋಗುರಕರ, ದೇಮಾನಿ ಮಡಿವಾಳ, ವಿಠ್ಠಲ ಚಲವಾದಿ, ರಾಜೇಂದ್ರ ರೇವಣಕರ ತಿಳಿಸಿದರು.
Leave a Comment