ಹಳಿಯಾಳ:- ಆಧುನಿಕ ಜಗತ್ತಿನಲ್ಲಿ ಸಂಸ್ಕಾರಗಳ ಕೊರತೆ ಇದ್ದು ಪರಸ್ಪರರು ಪ್ರೀತಿ ವಿಶ್ವಾಸದಿಂದ ಬಾಳಲು ಹಾಗೂ ಪ್ರತಿಯೊಬ್ಬರು ಸಂಸ್ಕಾರವಂತರಾಗುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರ ಮನೆಗಳಲ್ಲೂ ಭಗವದ್ಗೀತೆ ಇರಬೇಕು ಹಾಗೂ ಭಗವದ್ಗೀತೆ ಪಠಣ ಇಂದಿನ ಅವಶ್ಯಕತೆ ಎಂದು ಬೆಂಗಳೂರಿನ ಗವೀಪುರಂನ ಗೋಸಾಯಿ ಮಹಾಸಂಸ್ಥಾನ ಮಠ- ಭವಾನಿ ಪೀಠದ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಮರಾಠಾ ಸಮಾಜದ ಜಗದ್ಗುರುಗಳಾದ ಬಳಿಕ ಹಳಿಯಾಳದಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಇದೆ ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸಿರುವ ಸ್ವಾಮೀಜಿಗಳನ್ನು ಹಳಿಯಾಳ ಮರಾಠಾ ಸಮಾಜದ ವಿವಿಧ ಸಂಘಟನೆಯವರು, ಸಮಾಜದ ಮುಖಂಡರು ಇಲ್ಲಿಯ ಮರಾಠಾ ಭವನದಲ್ಲಿ ಸ್ವಾಗತಿಸಿದ ಬಳಿಕ ಸ್ವಾಮೀಜಿಗಳು ಮಾತನಾಡಿದರು.
ಭಗವದ್ಗೀತೆ ಇಡಿ ವಿಶ್ವಕ್ಕೆ ದಾರಿದೀಪವಾಗಿದೆ. ಮಹಾನ್ ಪುರುಷರು ಕೂಡ ಗೀತೆಯ ಬಗ್ಗೆ ಎಲ್ಲೆಡೆ ಉಲ್ಲೇಖ ಮಾಡಿದ್ದು ಅದರ ಮಹತ್ವವನ್ನು ಜಗಕ್ಕೆ ಸಾರಿದ್ದಾರೆ ಅ ಕಾರಣ ಪ್ರತಿಯೊಬ್ಬ ಮನುಷ್ಯ ಭಗವದ್ಗೀತೆಯನ್ನು ಅನುಸರಿಸಿದರೇ ಉತ್ತಮ ಸಂಸ್ಕಾರಯುತ ಜೀವನ ನಿರ್ವಹಿಸಲು ಸಾಧ್ಯವೆಂದರು.
ಸಾಮಾನ್ಯ ಜನರು, ರೈತರನ್ನು(ಮಾವಳೆ) ಒಗ್ಗೂಡಿಸಿ ಹಿಂದವಿ ಸ್ವರಾಜ್ಯವನ್ನು ನಿರ್ಮಿಸಿದ ಛತ್ರಪತಿ ಶೀವಾಜಿ ಮಹಾರಾಜರು ವಿಶ್ವಕ್ಕೆ ಅಜರಾಮರ ನಾಯಕರಾಗಿದ್ದು ಅವರ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕಿದೆ ಎಂದರು.
ಇನ್ನೂ ರಾಜ್ಯದಲ್ಲಿ ಮರಾಠಾ ಸಮುದಾಯದವರು ಸಂಘಟಿತರಾಗಬೇಕಾಗಿರುವ ಅವಶ್ಯಕತೆ ಇದೆ ಶೈಕ್ಷಣ ಕ, ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸಮುದಾಯದವರು ಒಂದೆ ಛತ್ರದಡಿ ಬಂದು ಸಂಘಟಿತರಾಗಿ ಸಮಾಜದ ಶ್ರೇಯೋಭಿವೃದ್ದಿಗಾಗಿ ಪ್ರಾಮಾಣ ಕವಾಗಿ ಶ್ರಮಿಸಬೇಕಿದೆ ಎಂದು ಕರೆ ನೀಡಿದರು.
ಮರಾಠಾ ಸಮುದಾಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಮಾತನಾಡಿ ಮರಾಠಾ ಸಮುದಾಯವನ್ನು ಪ್ರವರ್ಗ 3ಬಿಯಿಂದ 2ಎ ಗೇ ಸೇರಿಸಲು ಮರಾಠಾ ಸಮುದಾಯದಿಂದ ನಡೆದಿರುವ ಹೋರಾಟದ ಕುರಿತು. ಸಮಾಜದ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಸಮಾಜ ಸಂಘಟನೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರಾಮನಾಥ ಮಹಾರಾಜ ಸ್ವಾಮೀಜಿ, ಪ್ರಮುಖರಾದ ಮಂಗಳಾ ಪೀತಾಂಬರ ಕಶೀಲಕರ, ಎಲ್.ಎಸ್.ಅರಿಶೀನಗೇರಿ, ವಜ್ರೇಶ್ವರಿ ಶೆಟವಣ್ಣವರ, ತನುಜಾ ಕಾಮ್ರೇಕರ, ಅನಿಲ ಚವ್ವಾಣ, ಅಶೋಕ ಘೋಟ್ನೇಕರ, ಮಲ್ಲಾರಿ ಘಾಡಿ, ಅಪ್ಪಾರಾವ ಪೂಜಾರಿ, ಯಲ್ಲಪ್ಪಾ ಮಾಲವನಕರ ಮೊದಲಾದವರು ಇದ್ದರು.
Leave a Comment