ಹೊನ್ನವರ , ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಉತ್ತರ ಕನ್ನಡ ಕಾರವಾರಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ, ಕಾರವಾರ ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಾರವಾರ ಹಾಗೂ ಜಿಲ್ಲೆಯ ಎಲ್ಲಾ ವಿಶೇಷ ಶಾಲಾ ಸಂಸ್ಥೆಗಳ ಇವರ ಸಂಯುಕ್ತ ಆಶ್ರಯದಲ್ಲಿ ಸರ್ಪಿ ಸಮಾಜ ಸೇವಾ ಸಂಸ್ಥೆಯ ವತಿಯಿಂದ ನಡೆಸಲ್ಪಡುವ ಪೆದ್ರು ಪೊವೆಡಾ ವಿಶೇಷ ಶಾಲೆ ಹೊನ್ನಾವರ ಇದರ ನೇತ್ರತ್ವದಲ್ಲಿ ವಿಶ್ವ ವಿಶೇಷ ಚೇತನರ ದಿನಾಚರಣ 2018ರ ಕಾರ್ಯಕ್ರಮದ ಅಂಗವಾಗಿ ಸೇಂಟ್ ಆಂತೋನಿ ಪ್ರೌಢ ಶಾಲೆ ಕ್ರೀಡಾಂಗಣದಲ್ಲಿ ಕಿವುಡ ಮತ್ತು ಮೂಕ, ಅಂಧರು ಹಾಗೂ ಬುದ್ಧಿ ಮಾಂದ್ಯ ಮಕ್ಕಳಿಗೋಸ್ಕರ ಜಿಲ್ಲಾ ಮಟ್ಟದ ಕ್ರೀಡೆ ಹಾಗೂ ಸಾಂಸ್ಕøತಿಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ 10 ವಿಕಲಚೇತನ ಶಾಲೆಗಳಿಂದ ಸುಮಾರು 250 ಮಕ್ಕಳು ಭಾಗವಹಿಸಿದ್ದರು. ಇದರ ಉದ್ಘಾಟನೆ ಕಾರ್ಯಕ್ರಮವನ್ನು ಉಲ್ಲಾಸ ನಾಯ್ಕ ನೆರವೇರಿಸಿ ನಂತರ ಮಾತನಾಡಿ ್ಲ ಈ ಮಕ್ಕಳ ಜೊತೆಯಲ್ಲಿ ಭಾಗವಹಿಸುವುದು ನನ್ನ ಭಾಗ್ಯ. ವಿಶೇಷ ಚೇತನ ಮಕ್ಕಳು ಇತರ ಮಕ್ಕಳಂತೆ ಸಮಾಜದೊಂದಿಗೆ ಅನ್ಯೋನವಾಗಿ ಬದುಕು ನಡೆಸಲು ತುಡಿತ ವ್ಯಕ್ತ ಪಡಿಸುತ್ತಾರೆ. ನಮ್ಮ ಊರಿನಲ್ಲಿರುವ ವಿಶೇಷ ಚೇತನ ಮಕ್ಕಳಿಗೆ ನಾವೆಲ್ಲಾ ಪ್ರೋತ್ಸಾಹ ನೀಡಿದರೆ ಮಾತ್ರ ಅವರು ಸಾಧನೆ ಮಾಡಲು ಸಾಧ್ಯ ಎಂದÀರು.
ಗಿರೀಶ ಪದಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೊನ್ನಾವರ ತಾಲೂಕ ಅಧ್ಯಕ್ಷತೆ ವಹಿಸಿ ಧ್ವಜರೋಹಣ ನೆರವೇರಿಸಿ ವಿಕಲಚೇತನ ಮಕ್ಕಳಿಂದ ಪಥ ಸಂಚಲನದ ಕ್ರೀಡಾ ಗೌರವ ವಂದನೆ ಸ್ವೀಕರಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸತೀಶ ನಾಯ್ಕಮಾತನಾಡಿ ಹೊನ್ನಾವರದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದ್ದು ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳು ಇಂದು ತಮ್ಮಲ್ಲಿರುವ ಪ್ರತಿಭೆ ಪ್ರರ್ದಶನ ಮಾಡಲಿದ್ದಾರೆ. ವಿಶೇಷ ಚೇತನ ಮಕ್ಕಳು ಸಾಮನ್ಯ ಮಕ್ಕಳಂತೆ ಕ್ರೀಡಾ ಹಾಗೂ ಸಾಂಸ್ಕøತಿಕ ರಂಗದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಸಾಬೀತು ಪಡಿಸಲು ಪ್ರತಿಭೆ ಪ್ರರ್ದಶಿಸುವಂತೆ ಧೈರ್ಯ ತುಂಬಿದರು.
ವೇದಿಕೆಯಲ್ಲಿ ಸಮಾಜ ಸೇವಕ ನಸ್ರುಲ್ಲಾ ಸಿದ್ಧಿ ಮಹಮದ, ಟ್ರೀಜಾ ಫರ್ನಾಂಡಿಸ್, ಇದಾಲಿನ್ ವಾಜ್, ಸರ್ಫಿ ಸಂಸ್ಥೆಯ ನಿರ್ದೇಶಕಿ ನ್ಯಾನ್ಸಿ ಫರ್ನಾಂಡಿಸ್, ಪೆದ್ರು ಪೊವೆಡಾ ಶಾಲೆಯ ಪ್ರಾಂಶುಪಾಲರಾದ ಕುಮಾರಿ ಪ್ಲಾವಿಯಾ ಗೊನ್ಸಾಲ್ವಿಸ್, ಸಾಧನಾ ಬರ್ಗಿ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು, ಗಣಪತಿ ಪಟಗಾರ, ಎಮ್ ಎನ್ ನಾಯ್ಕ, ರಾಮಚಂದ್ರ ಹಳದೀಪುರ ಮುಂತಾದವರು ್ಲ ಉಪಸ್ಥಿತರಿದ್ದರು.
ವಿರಾಗ್ರಣ ಪ್ರಶಸ್ತಿಯನ್ನು ಮಹಾದೇವ ಭಟ್ಟ ಕೂರ್ಸೆ, ಕಿವುಡ ಮತ್ತು ಮೂಕ ಮಕ್ಕಳ ಶಾಲೆ ಶಿರಸಿ ಪಡೆದು ಕೊಂಡಿತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪದಕ ಹಾಗೂ ಪ್ರೋತ್ಸಾಹ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು. ಬ್ರೇಜಿಲ್ ಗೊನ್ಸಾಲ್ವಿಸ್ ಕಾರ್ಯಕ್ರಮ ಸಂಯೋಜಕರು ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆ À ಸುದೀಶ ನಾಯ್ಕ ನೆರವೇರಿಸಿದರು. ಪೆದ್ರು ಪೊವೆಡಾ ವಿಶೇಷ ಶಾಲೆಯ ಪ್ರಾಂಶುಪಾಲರಾದ ಕುಮಾರಿ ಪ್ಲಾವಿಯಾ ಗೊನ್ಸಾಲ್ವಿಸ್ ಎಲ್ಲರನ್ನು ವಂದಿಸಿದರು.
Leave a Comment