ಹೊನ್ನಾವರ: ಪ್ರಭಾತನಗರದಲ್ಲಿರುವ ಲಯನ್ಸ್ ಸಭಾ ಭವನದಲ್ಲಿ ನೂತನ ಸದಸ್ಯರ ಸೇರ್ಪಡೆ ಮತ್ತು ಪ್ರಮಾಣವಚನ ಬೋಧನೆ ಕಾರ್ಯಕ್ರಮ ನಡೆಯಿತು.
ವೈಸ್ ಡಿಸ್ಡಿಕ್ಟ ಗವರ್ನರ ಎಂ.ಜೆ.ಎಫ್ ಲಯನ್ ಡಾ| ಗಿರೀಶ ಕುಚಿನಾಡರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ, ಸದಸ್ಯರ ಕರ್ತವ್ಯ ಜವಾಬ್ದಾರಿ ಹಕ್ಕು ಸೇವಾಕಾರ್ಯಗಳ ಕುರಿತು ತಿಳಿಸಿದರು. ವಿನೋದ ನಾಯ್ಕ ಮಾವಿನಹೊಳೆ, ರೋಶನಶೇಟ ಹೊನ್ನಾವರ ದಯಾನಂದ ನಾರಾಯಣ ಗೌಡ ಮರಬಳ್ಳಿ, ಜಗದೀಶ ನಾಯ್ಕ ಹೊನ್ನಾವರ ಪ್ರಮಾಣವಚನ ಸ್ವೀಕರಿಸಿ, ಸದಸ್ಯರಾಗಿ ಸೇರ್ಪಡೆಯಾದರು.
ಮೆಂಬರಶಿಪ್ ಕಮಿಟಿ ಚೆರಮನ್ ಲ.ವಸಂತ ಪ್ರಭು , ಜಿ.ಎಂ.ಟಿ. ಕೊ. ಬರ್ತಿನೆಟರ್ ಲ. ಗೋಪಾಲಕೃಷ್ಣ ಬಿಂದಗಿ ಅಭಿನಂದಿಸಿದರು.
ಲಯನ್ಸ ಅಧ್ಯಕ್ಷ ರಾಜೇಶ ಸಾಲೆಹಿತ್ಲ ಸ್ವಾಗತಿಸಿದರು . ಕಾರ್ಯದರ್ಶಿ ಸುರೇಶ ಎಸ್. ವಂದಿಸಿದರು. ಕುಮಾರಿ ಚರಣಾ ಎಸ್. ಪ್ರಾರ್ಥಿಸಿದರು. ಪ್ರದೀಪ ಶೆಟ್ಟಿ ಧ್ವಜವಂದನೆ ಮಾಡಿದರು. ಜೀವೋತ್ತಮ ನಾಯಕ ಮತ್ತು ಶಾಂತಾರಾಮ ನಾಯ್ಕ ನಿರೂಪಿಸಿದರು. ಎನ್.ಜಿ ಭಟ್ಟ ಪುಪ್ಪಗುಚ್ಚ ನೀಡಿದರು.
Leave a Comment