ಹೊನ್ನಾವರ: ತಾಲೂಕಿನ ನಗರೆ ಸ.ಹಿ.ಪ್ರಾ.ಶಾಲೆ ನಂ.1. ಇದರ ವಾರ್ಷಿಕ ಸ್ನೇಹ ಸಮ್ಮೇಳನವು ಯಶಸ್ವಿಯಾಗಿ ನೆರವೇರಿತು.
ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಶಿಕ್ಷಕರ ಪರಿಶ್ರಮ, ಎಸ್.ಡಿ.ಎಮ್.ಸಿ. ಸಹಕಾರದೊಂದಿಗೆ ನಗರೆ ಶಾಲೆ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿರುವದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸದ್ದ ಮುಗ್ವಾ ಗ್ರಾ.ಪಂ ಅದ್ಯಕ್ಷ ಟಿ.ಎಸ್.ಹೆಗಡೆ ಮಾತನಾಡಿ ನಗರೆ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮವನ್ನಾಗಲೀ ಅತ್ಯಂತ ಯಶಸ್ವಿಯಾಗಿ ಆಯೋಜಿಸುತ್ತಾರೆ ಎಂದು ಪ್ರಸಂಶಿಸಿದರು.
ದೈಹಿಕ ಶಿಕ್ಷಣ ಪರಿವೀಕ್ಷಕರಾದ ಜಿ.ಎಚ್.ನಾಯ್ಕ ‘ಮಯೂರ’ ಮಕ್ಕಳ ಹಸ್ತ ಪತ್ರಿಕೆ ಬಿಡುಗಡೆಗೊಳಿಸಿದರು.
ಸಭೆಯಲ್ಲಿ ತಾ.ಪಂ ಉಪಾಧ್ಯಕ್ಷೆ ಲಲಿತಾ ನಾಯ್ಕ, ಗ್ರಾ.ಪಂ ಸದಸ್ಯ ಆಯ್.ವಿ.ನಾಯ್ಕ, ಗಣಪಿ ಮುಕ್ರಿ.ಸಂತೋಷ ನಾಯ್ಕ,ಎಸ್.ಡಿ.ಎಮ್.ಸಿ.ಅದ್ಯಕ್ಷ ಮಂಜುನಾಥ ನಾಯ್ಕ ಉಪಸ್ಥಿತರಿದ್ದರು.
ಶಾಲಾ ಮುಖ್ಯಾಧ್ಯಾಪಕ ಗಣಪತಿ ಗೌಡ ಎಲ್ಲರನ್ನೂ ಸ್ವಾಗತಿಸಿದರು.ಸಹ ಶಿಕ್ಷಕಿ ಗೌರಿ ಮುಕ್ರಿ ಅಭಿನದಿಸಿದರು.
Leave a Comment