ಹೊನ್ನಾವರ: ಜಿಲ್ಲಾ ಪಂಚಾಯತ ಉತ್ತರಕನ್ನಡ , ಪಶುಸಂಗೋಪನಾ ಇಲಾಖೆ ಮತ್ತು ಸರ್ವೋದಯ ಯುವಕ ಸಂಘ ಕವಲಕ್ಕಿ ಇವರ ಸಹಯೋಗದಲ್ಲಿ ಒಂದು ದಿನದ ಮಿಶ್ರತಳಿ ಜಾನುವಾರು ಪ್ರದರ್ಶನ ಮತ್ತು ಉಚಿತ ಲಸಿಕಾ ಕಾರ್ಯಕ್ರಮ ಮುಗ್ವಾ ಸುಬ್ರಹ್ಮಣ್ಯ ದೇವಾಲಯ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ಕುಮುಟಾ ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಮಾತನಾಡಿ ಗೋವು ಹಲವಾರು ಪ್ರಯೋಜನವನ್ನು ನೀಡುವ ಸಾಕು ಪ್ರಾಣಿ. ಹಿಂದುಗಳು ಪೂಜ್ಯಭಾವನೆಯಿಂದ ಗೌರವಿಸುವ ಈ ಸಂತತಿ ವೃದ್ದಿಯಾಗಬೇಕು. ನಾವು ವಿಭಿನ್ನವಾಗಿರುವ ತಳಿಗಳ ಗೋವಿನ ಪರಿಚಯ ಮಾಡಿಕೊಳ್ಳುವ ಜೋತೆ ಅವುಗಳ ಪಾಲನೆ ಪೋಷಣೆಯ ಕುರಿತು ಮಾಹಿತಿ ದೊರೆಯುವುದು ಇದರ ಪ್ರಯೋಜನ ಪಡೆದು ಪಸುಸಂಗೋಪನೆಯ ಬಗ್ಗೆ ಒಲವು ಮೂಡಿಸಿಕೊಳ್ಳಬೇಕು ಎಂದರು.
ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ ಭಾರತದ ಶ್ರೀಮಂತಿಕೆಗೆ ಗೋವು ಕಾರಣ. ಗೋವಿನ ತಳಿ ಅಭಿವೃದ್ದಿಗೆ ಸರ್ಕಾರದ ಇಂತಹ ಕಾರ್ಯಕ್ರಮ ಕೇವಲ ಅಧಿಕಾರಿಗಳ ಕಾರ್ಯಕ್ರಮವಾಗದೇ ರೈತರು ಬಾಗವಹಿಸಿ ಯಶ್ವಸಿ ಗೊಳಿಸಬೇಕು. ಆಗ ಮಾತ್ರ ಸರ್ಕಾರದ ಕಾರ್ಯಕ್ರಮ ಯಶ್ವಸಿಯಾಗಲೂ ಸಾಧ್ಯ. ಅಧಿಕಾರಿಗಳೇ ನಡೆಸಿದರೆ ಪೋಟೊ ಕಾರ್ಯಕ್ರಮವಾಗುತ್ತದೆ ಸಾರ್ವಜನಿಕರು ಭಾಗವಹಿಸಿ ಉಪಯೋಗ ಪಡೆದರೆ ಮಾತ್ರ ಕಾರ್ಯಕ್ರಮದ ಉದ್ದೇಶ ಸಫಲತೆ ಕಾಣುತ್ತದೆ ಎಂದರು.
ವೇದಿಕೆಯಲ್ಲಿ ತಾಲೂಕ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ, ಮುಗ್ವಾ ಗ್ರಾ.ಪಂ ಅಧ್ಯಕ್ಷ ಟಿ,ಎಸ್.ಹೆಗಡೆ, ಕರ್ಕಿ ಗ್ರಾ.ಪಂ ಅಧ್ಯಕ್ಷ ಶ್ರೀಕಾಂತ ಮೋಗೇರ ಮತ್ತಿತರು ಉಪಸ್ಥಿತರಿದ್ದರು
Leave a Comment