ಹಳಿಯಾಳ: 2000ನೇ ಸಾಲಿನಲ್ಲಿ ಆರಂಭಗೊಂಡ ಹಳಿಯಾಳದ ‘ಹಳೆಯ ಚಿತ್ರ ಸಂಗೀತ ಪ್ರೇಮಿಗಳ ಸಂಘ’ದಿಂದ ಖ್ಯಾತ ಗಾಯಕ ಮೊಹಮ್ಮದ ರಫೀ ಹಾಗೂ ಇತರ ಗಾಯಕರಾದ ಕಿಶೋರ ಕುಮಾರ ಮುಖೇಶ, ಹೇಮಂತ ಕುಮಾರ, ಮನ್ನಾಡೆ, ತಲತ ಮೆಹಮೂದ, ಮಹೇಂದ್ರ ಕಪೂರ ರವರಿಗೆ ಅವರು ಹಾಡಿದ ಕೆಲವು ಪ್ರಸಿದ್ದ ಹಾಡುಗಳನ್ನು ಹಾಡುವ ಮೂಲಕ ಶೃದ್ದಾಂಜಲಿ ಸಲ್ಲಿಸಲಾಯಿತು.
ಪಟ್ಟಣದ ಪೋಲಿಸ್ ಲೈನಲ್ಲಿರುವ ರಂಗಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ದೋ ಆಂಖೆ ಬಾರಾ ಹಾತ್’ ಚಿತ್ರದ “ಹೈ ಮಾಲಿಕ ತೆರೆ ಹಮ್” ಭಜನ ಡಾ. ಸಿ.ಎಸ್.ಒಶೀಮಠ ಹಾಗೂ ಸಂಘದ ಎಲ್ಲ ಕಲಾವಿದರು ಸೇರಿ ಸುಮುಧುರವಾಗಿ ಹಾಡಿ ಜನರ ಮೆಚ್ಚಿಗೆ ಪಡೆದರು.
ಎವರಗ್ರೀನ್ 30 ಗೀತೆಗಳನ್ನು ಹಾಡಿದ ಕಲಾವಿದರು:-
ಒಟ್ಟೂ 30 ಗೀತೆಗಳನ್ನು ಸಾಧರ ಪಡಿಸಲಾಗಿದ್ದು ಡಾ. ಎಚ್.ಎ.ಇಳಕಲ್ ಹಾಡಿದ ‘ಮೆರೆ ಹಮ್ ದಮ್ ಮೆರೆ ದೊಸ್ತ’ ಚಿತ್ರದ “ಮೆರೆ ದುಶ್ಮನ್ ತು ಮೇರಿ ದೋಸ್ತಿ ಕೊ ತರಸೇ’ ಹಾಗೂ ಹಾಗೂ ಡಾ. ಸಿ.ಎಸ್.ಓಶೀಮಠ ನೂತನ ಗಾಯಕಿ ಮಾಲಾ ಸಿದ್ಧಿರೊಂದಿಗೆ ಹಾಡಿದ ‘ಆದಮಿ ಮುಸಾಫೀರ ಹೈ’ (ಚಿತ್ರ ಆಪ್ನಾಪನ) ಜನರ ಉತ್ತಮ ಮೆಚ್ಚುಗೆ ಪಡೆದವು.
ರವಿ ನಾಯರ ಹಾಗೂ ಶರ್ಮಿಳಾ ಹಾಡಿದ ‘ದಿಲ್ ತೆರಾ ದಿವಾನಾ’ ಚಿತ್ರದ “ದಿಲ್ ತೆರಾ ದಿವಾನಾ ಹೈ ಸನಮ್” ಗೆಕುಡಾ ಶ್ರೋತ್ರುಗಳ ಮೆಚ್ಚುಗೆ ದೊರಕಿತು. ಅನಿಲ್ ಬದ್ರಿ ಹಾಡಿದ ‘ಕಿಸಿನಾ ಕಿಸಿಸೆ’ ಅನಿಲ ಬದ್ರಿ ತೀರ ಉತ್ಸಾಹದಿಂದ ಹಾಡಿದರು ಶೌಕತ್ ಅಲಿರೋಣ ಸಾದರ ಪಡಿಸಿದ ‘ಆಜಿ ಐಸಾ ಮೊಕಾ ಕಹಾ ಮಿಲೆಗಾ’(ಚಿತ್ರ- ಆ್ಯನ್ ಇವನಿಂಗ್ ಇನ್ ಪ್ಯಾರಿಸ್) ಅವರು ರಾಧಾ ಪೂಜಾರದೊಂದಿಗೆ ಸಾದರ ಪಡಿಸಿದ ‘ನಮಕ್ ಹಲಾಲ’ ಚಿತ್ರದ ‘ಇಮ್ಪ್ತಿಹಾ ಹೋಗಯಿ’ ಗೀತಕ್ಕೆ ಪ್ರಚಂಡ ಚಪ್ಪಾಳೆ ದೊರಕಿತು.
ಜನರ ಮೆಚ್ಚುಗೆ :-
ಹಳಿಯಾಳದ ಗಾಯಕ ಅರುಣ ಗೊಂಧಳಿ ಪತ್ನಿ ಭಾರತಿಯೊಂದಿಗೆ ಹಾಡಿದ ‘ಮುಜೆ ಕಿತನಾ ಪ್ಯಾರ ಹೈ ತುಮಸೆ’, ಶೌಕತ್ಅಲಿ ಹಾಗೂ ರೂಪಾಲಿ ‘ಆರಾಧನಾ’ ಚಿತ್ರದ ‘ಗುನ ಗುನಾರಹಾ ಹೈ’ ಜನರ ಮೆಚ್ಚುಗೆ ಪಡೆದವು. ಜೀವನದ ಸತ್ಯ ಹೇಳುವ ರಫೀ ರವರಿಂದ ‘ಏ ದುನಿಯಾ ನಹಿ ಜಾಹೀರ ಕಿಸಿಕಿ’ ಶ್ರೋತ್ರುಗಳ ಮೆಚ್ಚುಗೆ ಪಡೆಯಿತು ಒಟ್ಟಾರೆ ಎಲ್ಲ ಮೂವತ್ತು ಗೀತೆಗಳಿಗೆ ಜನರ ಪ್ರಚಂಡ ಮೆಚ್ಚುಗೆ ದೊರಕಿತು.
ಸಚಿವ ದೇಶಪಾಂಡೆಯಿಂದ ಶುಭ ಸಂದೇಶ :- ಸಚಿವ ಆರ್.ವಿ ದೇಶಪಾಂಡೆ ಹಾಗೂ ಎಮ್.ಎಲ್.ಸಿ ಎಸ್.ಎಲ್.ಘೊಟ್ನೇಕರ, ನಿಪ್ಪಾಣ ನಗರದ ಖ್ಯಾತ ಉದ್ಯಮಿ ಹಾಗೂ ಹಳೆಯ ಚಿತ್ರ ಗೀತೆಗಳ ಪ್ರೇಮಿ ಪ್ರವೀಣ ಶಾಹ ಹಾಗೂ ಬೆಳಗಾವಿಯ ಪ್ರಸಿದ್ಧ ಹಳೆಯ ಚಿತ್ರ ಸಂಗೀತ ಚಿತ್ರಗಳ ದಾಖಲೆಗಳ ಸಂಗ್ರಹಕಾರ ರವಿ ನಾಫಡೆ ಕಾರ್ಯಕ್ರಮಕ್ಕೆ ಶುಭ ಸಂದೇಶ ಕಳಿಸಿದ್ದರು.
ಕಾರ್ಯಕ್ರಮಕ್ಕೆ ಆರ್ಥಿಕ ಸಹಾಯ:-
ಧಾರವಾಡದ ಉಚ್ಛ ನ್ಯಾಯಾಲಯದ ಖ್ಯಾತ ವಕೀಲರಾದ ವೆಂಕಟೇಶ ಅಥಣ ಹಾಜರಿದ್ದರು. ಕಾರ್ಯಕ್ರಮಕ್ಕಾಗಿ ಅರಣ್ಯ, ಚಿಕ್ಕ ನೀರಾವರಿ, ಪಿ,ಡಬ್ಲೂ.ಡಿ, ವಿ.ಆರ್.ಡಿ.ಎಮ್.ಟ್ರಸ್ಟ, ದಾಂಡೇಲಿಯ ಕಾಗದ ಕಾರ್ಖಾನೆ ಮುಂತಾದವರಿಂದ ಆರ್ಥಿಕ ಸಹಾಯ ದೊರಕಿತು ಎಂದು ಸಂಘದ ಗೌರವಾಧ್ಯಕ್ಷ ಬಿ.ಆರ್.ವಿಭೂತೆ ತಿಳಿಸಿದರು.
Leave a Comment