ಹೊನ್ನಾವರ: ತಾಲೂಕಿನ ಚಿಕ್ಕನಕೊಡ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಟ್ಟಾ ಮಜರೆಯಲ್ಲಿ ಇರ್ವರು ವ್ಯಕ್ತಿಗಳು ಅನಧಿಕೃತವಾಗಿ ಹಂದಿ ಸಾಕಣೆ ಕೇಂದ್ರÀ ನಡೆಸುತ್ತಿದ್ದು, ಸುತ್ತ-ಮುತ್ತಲ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಎದುರಾಗುವ ಭೀತಿ ಎದುರಾಗಿದ್ದು ಕೂಡಲೇ ಘಟಕವನ್ನು ತೆರವುಗೊಳಿಸಬೇಕು ಎಂದು ಮುಟ್ಟಾ ವ್ಯಾಪ್ತಿಯ ಜನತೆ ಆಗ್ರಹಿಸಿದ್ದಾರೆ.
ಜೂಜೆ ಲೋಪೀಸ್ ಮತ್ತು ರೊನಾಲ್ಡ್ ಎನ್ನುವವರು ಅಕ್ರಮವಾಗಿ ಹಂದಿ ಸಾಕಣೆ ನಡೆಸುತ್ತಿದ್ದು, ಸುತ್ತಲಿನ ಪರಿಸರದ ಮೇಲೆ,ಜನರ ಮೇಲೆ ತೀವೃವಾದ ಪರಿಣಾಮ ಬಿರಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಹಲವು ಬಾರಿ ಗ್ರಾಮ ಸಭೆಗಳಲ್ಲಿ ವಿಷಯ ಪ್ರಸ್ಥಾಪಿಸಿದ್ದೇವೆ ಪೋಲೀಸ್ ಠಾಣೆಗೆ ದೂರು ನೀಡಿದ್ದೇವೆ,ತಹಸಿಲ್ದಾರ್ಗೆ ,ಪಂಚಾಯತ್ಗೆ ಮನವಿ ನೀಡಿಯು ಆಗಿದೆ. ಯಾರಿಂದಲು ಇನ್ನು ಕ್ರಮ ಕೈಗೊಂಡಿಲ್ಲ. ಬೆಕ್ಕಾಬಿಟ್ಟಿ ಕಲುಷಿತ ತ್ಯಾಜ್ಯಗಳಿಂದ ಸುತ್ತಲಿನ ಜನರ ಆರೋಗ್ಯ ಹದಗೆಡುತ್ತಿದೆ ಎನ್ನುವುದು ಗ್ರಾಮಸ್ಥರ ಆರೊಪವಾಗಿದೆ.ಈ ಬಗ್ಗೆ ಅಲ್ಲಿಯ ನಿವಾಸಿ ವಿನೋದ್ ಮಾದ್ಯಮದೊಂದಿಗೆ ಮಾತನಾಡಿ ಹಂದಿಸಾಕಣ ಕಾ ಘಟಕದಿಂದಾಗುವ ಸಮಸ್ಯೆ ಕುರಿತು ವಿವರಿಸಿದರು.
ಇನ್ನೊರ್ವ ನಿವಾಸಿ ಮಾರುತಿ ಆಚಾರ್ಯ ಮಾತನಾಡಿ ಹಂದಿಸಾಕಣ ಕಾ ಘಟಕ ಸ್ಥಾಪನೆಯಾದಾಗಿನಿಂದ ಜನರು ಉಟಮಾಡುವ ತುತ್ತಿಗು ಕಲ್ಲಾಕಿದಂತಾಗಿದೆ.ಜನಪ್ರತಿನಿಧಿಗಳಾದವರು ನಿರ್ಲಕ್ಷಿಸುತ್ತಿದ್ದಾರೆ. ಈ ಬಗ್ಗೆ ಶಾಸಕರಿಗು ಮೌಖಿಕವಾಗಿ ಹಲವು ಬಾರಿ ತಿಳಿಸಿದ್ದೇವೆ ಆದರು ಪ್ರಯೋಜನವಾಗಿಲ್ಲ. ಜನರ ಆರೋಗ್ಯ ಹದಗೆಡಿಸುವ ಯಾವುದೇ ಘಟಕ ಸ್ಥಾಪನೆಗೆ ಅನುಮತಿ ನೀಡಬಾರದು. ಈ ಘಟಕ ಸ್ಥಾಪನೆಗೆ ಪರೋಕ್ಷವಾಗಿ ಪಂಚಾಯತ್ ಪಿಡಿಓ,ಅಧ್ಯಕ್ಷರೆ ಕಾರಣರಾಗಿದ್ದಾರೆ ಎನ್ನುವ ಶಂಕೆ ಇದು ಎಂದು ಪಂಚಾಯತ್ ನಿರ್ಲಕ್ಷ್ಯತನದ ವಿರುದ್ದ ಆಕ್ರೋಶ ಹೊರಹಾಕಿದರು.
ಇನ್ನು ಸುತ್ತಲಿನ ನಿವಾಸಿಗಳಿಂದ ಇದುವರೆಗು ಹಲವು ಬಾರಿ ಮನವಿ ನೀಡಿದ್ದರು ಪ್ರಯೋಜನವಾಗದ ಕಾರಣ ಇದರಿಂದ ಭೇಸತ್ತ ಗ್ರಾಮಸ್ಥರು ಶನಿವಾರ ಗ್ರಾಮ ಪಂಚಾಯತ್ಗೆ ಭೇಟಿ ನೀಡಿ ಈ ಬಗ್ಗೆ ವಿಚಾರಿಸಿದ್ದಾರೆ. ಏಕೆ ತೆರವು ಕಾರ್ಯಾಚರಣೆ ನಡೆಸುತ್ತಿಲ್ಲ?ವಿಳಂಬ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಮಾತಿನ ಚಕಮಕಿ ಹೆಚ್ಚಾದ ಹಿನ್ನಲೆ,ಆರಕ್ಷರು ಸ್ಥಳಕ್ಕೆ ಭೇಟಿ ನೀಡುವಂತಾಯ್ತು, ಪರಿಸ್ಥಿತಿ ಶಾಂತಗೊಳಿಸಿ ಗ್ರಾಮಸ್ಥರು ಹಾಗೂ ಪಂಚಾಯತ್ ಕಾರ್ಯದರ್ಶಿಯೊಂದಿಗೆ ಕೆಲಕಾಲ ಮಾತನಾಡಿ ಸಮಸ್ಯೆ ಆದಷ್ಟು ಶೀಘ್ರ ಬಗೆಹರಿಯಲಿದೆ. ಜನವರಿ 17ರವರೆಗೆ ತೆರವುಗೊಳಿಸುವುದಕ್ಕೆ ಕಾಲವಕಾಶ ನೀಡಲಾಗಿದೆ ಎಂದು ತಿಳಿಸಿದರು. ಆದರು ನಿವಾಸಿಗಳಿಗೆ ಸಮಾಧಾನವಾಗದ ಕಾರಣ ಪಂಚಾಯತ್ಗೆ ಮನವಿ ನೀಡಿ, ತೆರವುಗೊಳಿಸುವ ಬಗ್ಗೆ ಅಧಿಕೃತವಾಗಿ ದಾಖಲೆ ನೀಡಿ, ನಿಗದಿತ ದಿನಾಂಕದೊಳಗೆ ಹಂದಿಸಾಕಾಣ ಕಾ ಘಟಕ ತೆರವಾಗದಿದ್ದಲ್ಲಿ ಗ್ರಾಮಸ್ಥರಿಂದ ಉಗ್ರಪ್ರತಿಭಟನೆ ಮಾಡುವುದಾಗಿ ಮನವಿಯಲ್ಲಿ ಎಚ್ಚರಿಸಿದರು.
Leave a Comment