ಹಳಿಯಾಳ :- ಹಳಿಯಾಳ ತಾಲೂಕಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಹೆಸರಿನಲ್ಲಿ ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿರುವ ವಿಧಾನ ಪರಿಷತ್ ಸದಸ್ಯರು ಈ ಆರೋಪಗಳು ಸಾಬಿತಾದರೇ ರಾಜಕೀಯ ನೀವೃತ್ತಿ ಘೋಷಿಸುತ್ತೇನೆಂದು ಹೇಳಿದ್ದು ಬೇಗನೆ ಅವರು ನಿವೃತ್ತಿ ಘೋಷಿಸಲು ಸಿದ್ದರಾಗಲಿ ಎಂದು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ನ ಜಿಲ್ಲಾಧ್ಯಕ್ಷ ಎನ್.ಎಸ್.ಜಿವೋಜಿ ಕರೆ ನೀಡಿದರು.
ದಾಖಲೆ ಬಿಡುಗಡೆ :- ಸೋಮವಾರ ಪಟ್ಟಣದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಹಣ ದುರುಪಯೋಗವಾಗಿರುವ ಕುರಿತು ಮಾಹಿತಿ ಹಕ್ಕಿನಡಿ ಸಂಬಂಧಿಸಿದ ಇಲಾಖೆಗಳಿಂದ ಪಡೆದ ದಾಖಲೆಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ನೀಡಿದ ದೂರಿನ ಪ್ರತಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಮಾತನಾಡಿದರು.
ಆಕಾಶದಲ್ಲಿ ಕಟ್ಟಡ ಕಟ್ಟುತ್ತಾರೆಯೇ :- ದಿ.2 ರಂದು ತಾವು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ನಿಂದ ದೂರು ನೀಡಿದ್ದೇವೆ. ಈ ಬಳಿಕ ಘೋಟ್ನೇಕರ ಅವರು ಪತ್ರಿಕಾ ಹೇಳಿಕೆಯಲ್ಲಿ ಅವರೇ ಒಪ್ಪಿಕೊಂಡಂತೆ ಹಳಿಯಾಳ ತಾಲೂಕಾ ಛತ್ರಪತಿ ಶಿವಾಜಿ ಮರಾಠಾ ಸಮುದಾಯ ಭವನಕ್ಕೆ ಸೂಕ್ತ ಸ್ಥಳ ಇಲ್ಲದ ಕಾರಣಕ್ಕೆ ತಮ್ಮ ಮಾಲಿಕತ್ವದ ಶಾಲೆಯ ಕಟ್ಟಡದ ಮೇಲೆ ಸಮುದಾಯ ಭವನ ನಿರ್ಮಿಸಿದ್ದೇನೆ ಎಂದು ಹೇಳಿದ್ದಾರೆ. ಆದರೇ ಇಲಾಖೆಗೆ ನೀಡಿದ ದಾಖಲೆಗಳ ಪ್ರಕಾರ 1 ಎಕರೆ ಖಾಲಿ ನಿವೇಶನದಲ್ಲಿ ಸಮುದಾಯ ಭವನ ನಿರ್ಮಿಸುವುದಾಗಿ ಹೇಳಿದ್ದು ಇಲಾಖೆಗೆ ತಪ್ಪು ಮಾಹಿತಿ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನೀಸಿದ ಎನ್.ಎಸ್.ಜೀವೋಜಿ, ವಿಪ ಸದಸ್ಯ ಘೋಟ್ನೇಕರ ಅವರೇ ಅಧ್ಯಕ್ಷ ಎಂದು ಘೋಷಿಸಿಕೊಂಡಿರುವ ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ಗೆ ಒಂದಿಂಚೂ ಜಾಗವಿಲ್ಲ ಹಾಗಾದರೇ ಶಿವಾಜಿ ಮರಾಠಾ ಭವನ ಎಲ್ಲಿ ಆಕಾಶದಲ್ಲಿ ಕಟ್ಟುತ್ತಾರೆಯೇ ಎಂದು ಖಾರವಾಗಿ ಪ್ರಶ್ನೀಸಿದರು.
ಹಣ ಎಲ್ಲಿ ಹೋಯಿತು 😕– ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಮರಾಠಾ ಭವನದ ಮುಂದುವರಿದ ಕಾಮಗಾರಿಗಾಗಿ 20 ಲಕ್ಷ ರೂ. ಮಂಜೂರಾಗಿದ್ದು 10 ಲಕ್ಷ ಹಣವನ್ನು ಖರ್ಚು ಮಾಡಲಾಗಿದೆ ಅಂತಾ ಘೋಟ್ನೇಕರ ಅವರೇ ತಿಳಿಸಿದ್ದು ಆ ಹಣ ಎಲ್ಲಿ ಖರ್ಚು ಮಾಡಲಾಗಿದೆ. ಅವರಿಗೆ ಹಣ ಖರ್ಚು ಮಾಡಲು ಪರವಾನಿಗೆ ಯಾರು ಕೊಟ್ಟರು ? ಎಂದು ಪ್ರಶ್ನೀಸಿದ ಜಿವೋಜಿ ಕೆಕೆಎಮ್ಪಿ ಬೆಂಗಳೂರು ಇದರ ಉಕ ಜಿಲ್ಲಾಧ್ಯಕ್ಷನಾಗಿ ನಾನು ಕಾರ್ಯನಿರ್ವಹಿಸುತ್ತಿರುವಾಗ ಇವರು ಹಣ ಯಾರಿಗೂ ತಿಳಿಸದೆ ಅದ್ಹೇಗೆ ಖರ್ಚು ಮಾಡಿದರು ಇದು ತಪ್ಪಲ್ಲವೇ ? ಎಂದು ಕಿಡಿಕಾರಿದರು.
ನ್ಯಾಯ ಸಿಗುವವವರೆಗೆ ಹೋರಾಟ:- ಹಳಿಯಾಳ ಟೌನ್ ಕ್ಷತ್ರೀಯ ಮರಾಠಾ ಪರಿಷತ್ ಇದರ ಹೆಸರಿಗೆ 20 ಲಕ್ಷ ರೂ. ಮಂಜೂರಿ ಆಗಿದ್ದು ಆ ಹಣ ಎಲ್ಲಿ ಖರ್ಚು ಮಾಡಲಾಗಿದೆ ? ಸದರಿ ಸಂಸ್ಥೆಯ ನಿವೇಶನ ಎಲ್ಲಿ ಇದೆ. ಸಮುದಾಯ ಭವನ ಎಲ್ಲಿ ಕಟ್ಟಲಾಗುತ್ತಿದೆ. ನಿವೇಶನ ಇಲ್ಲದೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಸಂಸ್ಥೆಯ ಹೆಸರಿನಲ್ಲಿ ಹಣ ಮಂಜೂರಿ ಮಾಡಿಸಿ ತಂದು ಬೇರೆ ಕಡೆ ಈ ಹಣ ಖುರ್ಚ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೇಗಳ ಸುರಿಮಳೆ ಗೈದಿರುವ ಎನ್.ಎಸ್.ಜಿವೋಜಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಲಾಗಿದ್ದು ನ್ಯಾಯ ಸಿಗುವವವರೆಗೆ ಹೊರಾಟ ನಡೆಸಲಾಗುವುದು ಎಂದು ಜಿವೋಜಿ ಸ್ಪಷ್ಟಪಡಿಸಿದರು.
ಸುದ್ದಿಗೊಷ್ಠಿಯಲ್ಲಿ ಮುಖಂಡರಾದ ವಿಜಯಕುಮಾರ ಬೋಬಾಟಿ, ತುಕಾರಾಮ ಪಟ್ಟೇಕರ, ಶಿವಾಜಿ ನರಸಾನಿ, ಪ್ರದೀಪ ಹಿರೇಕರ ಇದ್ದರು.
Leave a Comment