ಹಳಿಯಾಳ:- ಬೆಲೆ ಏರಿಕೆಗೆ ತಡೆ, ಉದ್ಯೋಗ ಸೃಷ್ಟಿ, ಮೋಟಾರ್ ವಾಹನ ತಿದ್ದುಪಡಿ ಮಸೂದೆ ಹಿಂಪಡೆತ ಸೇರಿದಂತೆ ಇನ್ನೂ ಹಲವಾರು ಬೇಡಿಕೆಗಳಿಗೆ ಆಗ್ರಹಿಸಿ ಎಡಸಂಘಟನೆಗಳು ನೀಡಿದ ಮುಷ್ಕರದ ಕರೆಯನ್ನು ಬೆಂಬಲಿಸಿ ಹಳಿಯಾಳದಲ್ಲಿ ಸಿ.ಐಟಿಯು ನೇತೃತ್ವದಲ್ಲಿ ಪ್ರತಿಭಟನಾ ಮೆರವಣ ಗೆ ನಡೆಯಿತು. ಆದರೇ ಬಂದ್ಗೆ ಮಾತ್ರ ಹಳಿಯಾಳದಲ್ಲಿ ಮಂಗಳವಾರ ಮಿಶ್ರ ಪ್ರತಿಕ್ರಿಯೇ ವ್ಯಕ್ತವಾಗಿದ್ದರೇ ಬುಧವಾರ ಮಾತ್ರ ಎಲ್ಲ ವಹಿವಾಟುಗಳು ಎಂದಿನಂತೆ ನಡೆದು ಬಂದ್ ವಿಫಲವಾಗಿದ್ದು ಕಂಡು ಬಂದಿತು.
ಹಳಿಯಾಳದಲ್ಲಿ ಬಸ್ ಸಂಚಾರ ಹಾಗೂ ಬ್ಯಾಂಕ್ಗಳು ಮಾತ್ರ ಸ್ಥಗಿತಗೊಂಡಿತ್ತು ಹೊರತು ಪಡಿಸಿದರೇ ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆದವು.
ಇಲ್ಲಿಯ ಮಿನಿ ವಿಧಾನ ಸೌಧದ ಆವರಣದಲ್ಲಿ ಪ್ರತಿಭಟನೆಯನ್ನು ನಡೆಸಿದ ಸಿಐಟಿಯು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ವಿಪ ಸದಸ್ಯರ ಬೆಂಬಲ :- ಉತ್ತರ ಕನ್ನಡ ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಪ್ರತಿಭಟನಾಕಾರರನ್ನು ಭೇಟಿಯಾಗಿ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದರು ಹಾಗೂ ಕಾರವಾರದಲ್ಲಿ ಪ್ರತಿಭಟನಾ ನೀರತರನ್ನು ಬಂಧಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಬಿಡುಗಡೆಗೊಳಿಸಿ ಮನವಿ :- ಕಾರವಾರ ಬಸ್ ನಿಲ್ದಾಣದಲ್ಲಿ ಬಸ್ಗಳನ್ನು ಬಂದ್ ಮಾಡಿಸುವ ವೇಳೆ ಅಂಗನವಾಡಿ ಜಿಲ್ಲಾಧ್ಯಕ್ಷೆ ಯಮುನಾ ಗಾಂವಕರ ಹಾಗೂ ಇತರ 5 ಜನ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದ್ದು ಅವರನ್ನು ಯಾವುದೇ ಷರತ್ತು ಇಲ್ಲದೇ ಬಿಡುಗಡೆ ಗೊಳಿಸುವಂತೆ ಕೊರಿ ಸಿಐಟಿಯು ಹಳಿಯಾಳ ತಾಲೂಕಾ ಸಮೀತಿಯಿಂದ ಪ್ರತಿಭಟನಾಕಾರರ ನೇತೃತ್ವದಲ್ಲಿ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಟಿ.ಎಮ್.ಗುರಬಣ್ಣನವರ, ಹನುಮಂತ ಸಿಂದೋಗಿ, ಜಯಶ್ರೀ ಹಿರೇಕರ, ಬ್ರಿಜಿಟಾ ಬೃಗಾಂಜಾ, ಶಶಿಕಲಾ ಬೆನ್ನಿಕೊಪ್ಪ. ಶೋಭಾ ಕುರಟ್ಟಿ, ಸಂಗೀತಾ ಅಂಗ್ರೋಳ್ಳಿ, ಗಿರಿಜಾ ಮರಾಠೆ, ಹಸೀನಾ ಶೇಖ್, ಜಯಶ್ರೀ ಚವ್ಹಾನ, ಲಲಿತಾ ಚಲವಾದಿ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾ.ಪಂ ನೌಕರರು, ಅಕ್ಷರದಾಸೋಹ ಸಿಬ್ಬಂದಿ, ಪುರಸಭಾ ಗುತ್ತಿಗೆ ನೌಕರರು ಇತರರು ಭಾಗವಹಿಸಿದ್ದರು.
Leave a Comment