ಹೊನ್ನಾವರ ..ರಕ್ತದಾನ ಮಾಡುವುದು ಉತ್ತಮ ಕೆಲಸವಾಗಿದ್ದು, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರ ಜೀವ ರಕ್ಷಣೆ ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳು ನಿರ್ವಹಿಸಬೇಕು ಆ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಲು ಪ್ರಯತ್ನಿಸಬೇಕು ಎಂದು ಡಾ. ರಾಜೇಶ ಕಿಣ , ವೈದ್ಯಾಧಿಕಾರಿಗಳು, ತಾಲೂಕಾ ಆಸ್ಪತ್ರೆ ಹೊನ್ನಾವರ ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರ, ಲಯನ್ಸ್ ಕಬ್ಲ್ ಹೊನ್ನಾವರ ಹಾಗೂ ಸರ್ಕಾರಿ ಆಸ್ಪತ್ರೆ ಹೊನ್ನಾವರದ ಸಹಯೋಗದಲ್ಲಿ ನಡೆದ ರಕ್ತದಾನದ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಆಗಿ ಭಾಗವಹಿಸಿ ಮಾತನಾಡಿದರು.
ವಿನಾಯಕ ಪಟಗಾರ ಮಾತನಾಡಿ ರಕ್ತದಾನ ಎನ್ನುವುದು ಅನ್ನದಾನಕ್ಕಿಂತ ಶ್ರೇಷ್ಠವಾಗಿದ್ದು, ಧಾರ್ಮಿಕ ಕ್ಷೇತ್ರದಲ್ಲಿ ದೇವರಿಗೆ ಹರಕೆಯನ್ನು ಹೊರುವ ಸಂದರ್ಭದಲ್ಲಿ ರಕ್ತದಾನ ಮಾಡುತ್ತೇನೆ ಎಂದು ಪ್ರತಿಜ್ಞೆ ಕೈಗೊಳ್ಳಬೇಕು ಹಾಗೂ ಆ ಮೂಲಕ ಇತರರ ಜೀವ ಉಳಿಸಬೇಕು ಎಂದು ಹೇಳಿದ್ದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕಬ್ಲ್ನ ಅಧ್ಯಕ್ಷರಾದ ರಾಜೇಶ ಸಾಳೇಹಿತ್ತಲ್ ಮಾತನಾಡಿ ಪ್ರತಿಯೊಬ್ಬರು ನಮ್ಮೊಂದಿಗೆ ಕೈ ಜೋಡಿಸಿ ರಕ್ತದಾನ ಶಿಬಿರ ಯಶ್ವಸಿಗೊಳಿಸಬೇಕು ಎಂದದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗೇಶ ಶೆಟ್ಟಿ, ಪ್ರಭಾರಿ ಪ್ರಾಂಶುಪಾಲರು ವಹಿಸಿ ಮಾತನಾಡಿದರು ಹಾಗೂ ಈ ಕಾರ್ಯಕ್ರಮದಲ್ಲಿ ಲಯನ್ಸ್ ಕಬ್ಲನ್ ಇತರ ಸದಸ್ಯರು ಭಾಗವಹಿಸಿದರು.
ಗಾಯತ್ರಿ ಗೌಡ ಕಾರ್ಯಕ್ರಮ ನಿರೂಪಿಸಿದರು. ಯು. ಎಸ್. ವಿದ್ಯಾಶ್ರೀ ವಂದಿಸಿದರು. ರೇಷ್ಮಾ ಸಂಗಡಿಗರು ನಾಡಗೀತೆ ಹಾಡಿದರು. ಜೀನತ್ಯವರು ಸ್ವಾಗತಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆ ಹೊನ್ನಾವರದಲ್ಲಿ ಏರ್ಪಡಿಸಿದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದರು.
Leave a Comment