ಹಳಿಯಾಳ:- ಹಳಿಯಾಳ-ಧಾರವಾಡ ರಸ್ತೆಯ ಮಾವಿನಕೊಪ್ಪ ಗ್ರಾಮ ಬಳಿಯ ಅರಣ್ಯ ಇಲಾಖೆ ಚೆಕ್ಪೊಸ್ಟ್ ಸಮೀಪದ ಅಪಾಯಕಾರಿ ತೀರುವಿನಲ್ಲಿ 2 ಕಾರುಗಳ ಮಧ್ಯೆ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸುವ ಮೂಲಕ ಸರಣ ಅಪಘಾತವಾಗಿರುವ ಬಗ್ಗೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಿಂಗಸೂರು ತಾಲೂಕಿನ ಗುರುಗಂಟಾ ನಿವಾಸಿ ದುರ್ಗಯ್ಯಾ ಹನುಮಂತ ನಾಯಕ ಈ ಕುರಿತು ಹಳಿಯಾಳ ಠಾಣೆಯಲ್ಲಿ ದೂರು ನೀಡಿದ್ದು ದಾಂಡೇಲಿಯ ಕಾರ್ ಚಾಲಕ ಶಾನವಾಜ್ ಕಾಶಿನಟ್ಟಿ ಹಾಗೂ ಧಾರವಾಡ ನಿವಾಸಿ ಸರ್ಕಾರಿ ನೌಕರ ಪ್ರಶಾಂತ ನವಲೆ ಎನ್ನುವವರ ಮೇಲೆ ನಿಷ್ಕಾಳಜಿಯಿಂದ ಕಾರು ಚಾಲನೆ ಮಾಡಿ ಅಪಘಾತ ಪಡಿಸಿದ ಬಗ್ಗೆ ದೂರು ದಾಖಲಾಗಿದೆ.
ಅಪಘಾತದಲ್ಲಿ ಗುಲಾಮ್ ಕರಾದಿ ಎನ್ನುವವನಿಗೆ ಗಂಭೀರ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ರವಾನಿಸಲಾಗಿದ್ದು ಉಳಿದಂತೆ ಅರುಣ ಗಾಯಕವಾಡ, ಲಲಿತಾ ನವಲೆ, ದೀಪಾ ನವಲೆ ಅವರಿಗೆ ಗಾಯಗಳಾಗಿದ್ದು ಹಳಿಯಾಳ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
Leave a Comment