ಹಳಿಯಾಳ:- ಎಲ್ಲ ಸಮಾಜದವರು ಒಗ್ಗೂಡಿ ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಎಲ್ಲರಿಗೂ ಮಾದರಿಯಾಗಿದ್ದು, ಮುಂದೆ ಕೂಡ ಎಲ್ಲರೂ ಒಗ್ಗಟ್ಟಾಗಿ ಸಾಮಾಜಿಕ ಕಾರ್ಯಗಳನ್ನು ನೆರವೆರಿಸುವಂತೆ ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠದ ಮರಾಠಾ ಜಗದ್ಗುರು ಮಂಜುನಾಥ ಮಹಾರಾಜ ಕರೆ ನೀಡಿದರು.
ತಾಲೂಕಿನ ತೇರಗಾಂವ ಗ್ರಾಮದ ಶ್ರೀ ಛತ್ರಪತಿ ಶಿವಾಜಿ ಟ್ರಸ್ಟ ಕಮೀಟಿ ಹಾಗೂ ಕ್ಷತ್ರೀಯ ಮರಾಠಾ ಸಮಾಜ, ಸಕಲ ಸಮಾಜದವರು ಮತ್ತು ಸಮಸ್ತ ಗ್ರಾಮದ ಸಾರ್ವಜನಿಕರಿಂದ ಗ್ರಾಮದ ಬಸ್ ನಿಲ್ದಾಣ ಸಮೀಪದ ಕೆರೆಯ ಮೇಲೆ ನಿರ್ಮಿಸಲಾದ ಭವ್ಯ ಪೀಠದಲ್ಲಿ ಬೃಹತ್ ಅಶ್ವಾರೂಢ ಶೀವಾಜಿ ಪುಥ್ಥಳಿ ಪ್ರತಿಷ್ಠಾಪನೆ ಕಾರ್ಯದ ಬಳಿಕ ನಡೆದ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಹಿಂದೂ, ಮುಸ್ಲಿಂ, ಕ್ರೀಶ್ಚಿಯನ್, ಜೈನ್ ಹೀಗೆ ಧರ್ಮ, ಜಾತಿ ಭೇದ ಮರೆತು ರಾಷ್ಟ್ರಕ್ಕಾಗಿ ಹೋರಾಡಿದ್ದ ಶೀವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ ಎಲ್ಲರೂ ಒಂದಾಗಿ ಕಾರ್ಯಕ್ರಮ ಆಯೋಜಿಸಿರುವುದು ಮಾದರಿ ಕಾರ್ಯವಾಗಿದೆ. ತೇರಗಾಂವ ಗ್ರಾಮದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಜಾತ್ರೆಯಂತೆ ಶೃಂಗಾರಗೊಂಡಿರುವುದು ಸಂತಸದ ವಿಷಯ ಎಂದು ಕಾರ್ಯಕ್ರಮದ ಬಗ್ಗೆ ಸ್ವಾಮಿಜಿಗಳು ಶ್ಲಾಘನೆ ವ್ತಕ್ತಪಡಿಸಿದರು.
ದಿನಗಳ ಕಾಲ ಅದ್ದೂರಿಯಾಗಿ ನಡೆದ ಕಾರ್ಯಕ್ರಮ ತಾಲೂಕಿನೆಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಗ್ರಾಮವೆಲ್ಲ ಕೆಸರಿ ಪತಾಕೆಗಳು, ಭಗವಾ ಧ್ವಜ ಹಾಗೂ ತಳಿರು ತೊರಣಗಳಿಂದ ಶೃಂಗರಿಸಲ್ಪಟ್ಟಿದ್ದು ಗ್ರಾಮವೇ ಕೆಸರಿಮಯವಾಗಿ ಜಾತ್ರೆಯ ವಾತಾವರಣ ಸೃಷ್ಟಿಯಾಗಿದೆ. ದಿ.17 ರಂದು ಶಿವಾಜಿ ಮೂರ್ತಿಯ ಭವ್ಯ ಶೋಭಾಯಾತ್ರೆ ಸುಮಾರು 8 ಗಂಟೆಗಳ ಕಾಲ ಸಾವಿರಾರು ಯುವಕರ ಉಪಸ್ಥಿತಿಯಲ್ಲಿ ನಡೆಯಿತು. ದಿ.18 ಶುಕ್ರವಾರದಂದು ತೇರಗಾಂವ ಗ್ರಾಮದೇವಿ ದೇವಸ್ಥಾನದಿಂದ ಸುಮಂಗಲೆಯರಿಂದ ಕುಂಭ ಮೆರವಣ ಗೆ ಬಳಿಕ ರೋಹಿಣ ನಕ್ಷತ್ರ , ಕುಂಭ ಲಗ್ನದಲ್ಲಿ ಸಕಲ ಪೂಜಾ ವಿಧಿ ವಿಧಾನಗಳು, ಹೋಮ ಹವನಗಳನ್ನು ನೆರವೆರಿಸಿ ಶಾಸ್ರೋಕ್ತವಾಗಿ ಶೀವಾಜಿ ಮಹಾರಾಜರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಬಳಿಕ ವೇದಿಕೆ ಕಾರ್ಯಕ್ರಮಗಳು, ಅನ್ನ ಸಂತರ್ಪಣೆ, ತೇರಗಾಂವ ಸಂಗೀತ ಬಳಗದಿಂದ ರಸಮಂಜರಿ ಕಾರ್ಯಕ್ರಮಗಳು ನಡೆದವು. ಸುತ್ತಮುತ್ತಲ ಹಳ್ಳಿಗಳು ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಿಂದ ಶಿವಾಜಿ ಮಹಾರಾಜರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ತೇರಗಾಂವ ಗ್ರಾಮಕ್ಕೆ ಭೆಟಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಪ್ರಮುಖರಾಜ ಮಂಗಲಾ ಕಶೀಲಕರ, ಎನ್.ಎಸ್.ಜಿವೋಜಿ, ರಾಜು ಧೂಳಿ, ಸಂತೋಷ ರೆಣಕೆ, ವಿಎಮ್ ಘಾಡಿ, ಎನ್.ಜಿ.ಪಾಠನಕರ, ಮಹಾದೇವ ಶಿದಬಾನವರ, ಪ್ರಶಾಂತ ಬಾಳೆಕುಂದ್ರಿ, ದಾವಲಸಾಬ ಶೇಖ, ಶಂಕರ ರೆಣಕೆ, ಸುರೇಶ ಬೆಣಚೆಕರ,ವಿಜಯ ಶಿಂಧೆ, ಮಾರುತಿ ಬೊಸ್ಲೆ ಮೊದಲಾದವರು ಇದ್ದರು.
Leave a Comment