ಹೊನ್ನಾವರ“ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ, ಸರಿಯಾದ ಮಾರ್ಗದರ್ಶನ ದೃಢ ಸಂಕಲ್ಪ ಹಾಗೂ ಬದ್ದತೆ” ಬಹಳ ಪ್ರಮುಖವಾಗಿರುವ ಅಂಶಗಳು ಎಂದು ಹೊನ್ನಾವರದ ಡಿ.ಎಫ್.ಓ ವಸಂತರೆಡ್ಡಿ, ಕೆ. ವಿ. ಅವರು ಹೇಳಿದರು. ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರದ ಪ್ಲೇಸೆಮೆಂಟ್ ಸೆಲ್ ಆಯೋಜಿಸಿದ್ದ ಸ್ಫರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತಾದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
ಪದವಿ ಶಿಕ್ಷಣದ ಈ ಸಮಯವು ಬಹಳ ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ದೊರೆತಲ್ಲಿ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬಲ್ಲರು. ಹಾಗಾಗಿ ಗ್ರಂಥಾಲಯದ ಸಮರ್ಪಕ ಬಳಕೆಯಾಗಬೇಕು. ದಿನಪತ್ರಿಕೆಗಳನ್ನು ನಿಯಮಿತವಾಗಿ ಓದುವ ರೂಢಿ ಬೆಳಸಿಕೊಳ್ಳಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ. ಸುಮಂಗಲಾ ಬಿ. ನಾಯಕ ನಮ್ಮ ಗ್ರಾಮೀಣ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು, ನಿರಂತರ ಪರಿಶ್ರಮದಿಂದ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬಹುದಾಗಿದೆ ಎಂದರು.
ಪ್ಲೇಸಮೆಂಟ್ ಸೆಲ್ನ ಸಂಯೋಜಕರಾದ ಪ್ರೊ. ಕಾವ್ಯಶ್ರೀ ನಾಯ್ಕ ಸ್ವಾಗತಿಸಿದರು. ದತ್ತಾತ್ರೇಯ ವಂದಿಸಿದರು. ಸಂಗೀತಾ ನಿರೂಪಿಸಿದರು.
Leave a Comment