ಹೊನ್ನಾವರ. ಸ್ಥಳಿಯ ನ್ಯೂ ಇಂಗ್ಲಿಷ ಸ್ಕೂಲನಲ್ಲಿ ಧಾರವಾಡದ ಶ್ರೀ ರಾಮಕೃಷ್ಣಾಶ್ರಮ ಹಾಗೂ ವಿವೇಕಾನಂದಶ್ರಮದ ಸ್ವಾಮೀಜಿ ಪರಮ ಪೂಜ್ಯ ಶ್ರೀ ವಿಜಯಾನಂದ ಸರಸ್ಪತಿ ಸ್ವಾಮೀಜಿ ಯವರಿಂದ ಸ್ವಾಮಿ ವಿವೇಕಾನಂದರ ಆದರ್ಶಗಳ ಕುರಿತು ಉಪನ್ಯಾಸ ಏರ್ಪಡಿಸಲಾಗಿತ್ತು. ಶ್ರೀಗಳು ಶಾಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿವೇಕಾನಂದರ ಯಶಸ್ಸಿಗೆ ಕಾರಣವಾದ ಬಾಲ್ಯದ ಗುಣಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ವಿವೇಕಾನಂದರ ಹಲವಾರು ಉಕ್ತಿಗಳನ್ನು ವಿವಿಧ ಉದಾರಣೆಗಳೊಂದಿಗೆ ತಿಳಿ ಹೇಳಿದ ಶ್ರೀಗಳು ಆದರ್ಶಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯವೆಂದರು. ಏಕಾಗ್ರತೆ ಸಾಧನೆಯ ಕೀಲಿ ಕೈ ಎಂದು ಅಭಿಪ್ರಾಯಪಟ್ಟರು.
ವಿ. ಎಸ್. ಅವಧಾನಿ ಸ್ವಾಗತಿಸಿದರು. ಶಾಲಾ ಆಡಳಿತ ಮಂಡಳಿಯವರು ಫಲ ಪುಷ್ಪ ನೀಡಿ ಶ್ರೀಗಳನ್ನು ಅಭಿನಂದಿಸಿದರು. ಶಿಕ್ಷಕರಾದ ರಾಘವೇಂದ್ರ ಹೆಗಡೆ ನಿರೂಪಿಸಿದರು. ವಿದ್ಯಾರ್ಥಿಗಳಲ್ಲಿ ನೈತಿಕ ಶಿಕ್ಷಣ ನೀಡುವಲ್ಲಿ ಇದೊಂದು ಉತ್ತಮ ಕಾರ್ಯಕ್ರಮವಾಗಿತ್ತು.
Leave a Comment