ಹಳಿಯಾಳ:- ಪ್ರಧಾನ ಮಂತ್ರಿ ನರೇಂದ್ರ ಮೊದಿಯವರಿಗೆ ದೇವರು ಉತ್ತಮ ಆರೋಗ್ಯ ಕರುಣ ಸಲಿ ಹಾಗೂ ಅವರು ಮತ್ತೇ ಅಧಿಕಾರಕ್ಕೆ ಬರಲಿ ಎಂದು ತಾಲೂಕಿನ ಕಾಳಗಿನಕೊಪ್ಪದಲ್ಲಿ ನಡೆದ ಜಾತ್ರೆಯಲ್ಲಿ ಮೋದಿಜಿಯವರ ಹೆಸರಿನಲ್ಲಿ ಅಭಿಷೇಕ ಮಾಡಿದ ವಿದ್ಯಮಾನ ಈಗ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.
ಇದೇ ತಿಂಗಳ ಮೊದಲ ವಾರದಲ್ಲಿ ಕಾಳಗಿನಕೊಪ್ಪ ಗ್ರಾಮದ ಪಿಶೇಲಿಂಗೇಶ್ವರ ಮತ್ತು ಲಕ್ಷ್ಮೀ ದೇವಿಯ ಜಾತ್ರೆ ಸಂದರ್ಭದಲ್ಲಿ ಕಾಳಗಿನಕೊಪ್ಪ ಗ್ರಾಮದ ಗಣಪತಿ ಮಾರುತಿ ದೇವರಮಣ ಎನ್ನುವವರು ನರೇಂದ್ರ ದಾಮೋದರದಾಸ ಮೋದಿ ಹೆಸರಿನಲ್ಲಿ 101ರೂ. ಕಾಣ ಕೆ ನೀಡಿ ಅಭಿಷೇಕ ಮಾಡಿಸಿದ್ದಾನೆ. ಇದನ್ನು ಕಂಡ ಕೆಲವರು ಆತನಿಗೆ ಕೇಳಿದ್ದು ಸುಭದ್ರ ಭಾರತಕ್ಕಾಗಿ ಮೋದಿಜಿಯವರು ಇನ್ನೊಮ್ಮೆ ಪ್ರಧಾನ ಮಂತ್ರಿಯಾಗಬೇಕೆಂದು ಅವನು ಹೇಳಿದ್ದು ಅವರು ತಕ್ಷಣ ಆ ಕಾಣ ಕೆ ರಸಿದಿಯ ಪೊಟೊ ತೆಗೆದು ಫೇಸಬುಕ್ನಲ್ಲಿ ಹಾಕಿದ್ದು ಇದೀಗ ಇದು ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲದೇ ತಾಲೂಕಿನಾದ್ಯಂತ ಮೊಬೈಲ್ ವಾಟ್ಸಪ್ಗಳಲ್ಲಿ ಹರಿದಾಡುತ್ತಿದ್ದು ಎಲ್ಲೆಡೆ ಇದೆ ಚರ್ಚೆ ನಡೆಯುತ್ತಿರುವುದು ಕೇಳಿ ಬರುತ್ತಿದೆ.
Leave a Comment