ಹಳಿಯಾಳ:- ಉತ್ತರ ಕನ್ನಡ ಜಿಲ್ಲೆ
ಹಳಿಯಾಳ ತಾಲೂಕಿನ ಹಳಿಯಾಳ- ದಾಂಡೇಲಿ ರಾಜ್ಯ ಹೆದ್ದಾರಿಯ ಅಜಗಾಂವ ಸಮೀಪ
ವ್ಯಕ್ತಿಯೊರ್ವ ತನ್ನ ಕಾರಿನಲ್ಲೆ
ತಲೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಮೈಸೂರಿನ ಟಿ ನರಸೀಪುರ ನಿವಾಸಿ ಎನ್ನಲಾದ ಮಂಜುನಾಥ ವಾಸು ನಾಡ ಪಿಸ್ತೋಲ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ.
ಗ್ರಾಮಸ್ಥರ ಮಾಹಿತಿ ಆಧರಿಸಿ ಹಳಿಯಾಳ ಪೊಲೀಸ ಇಲಾಖೆಯ ಡಿವೈಎಸ್ಪಿ ಮೊಹನಪ್ರಸಾದ, ಪಿಎಸ್ ಐ ಆನಂದಮೂರ್ತಿ, ಸಿಪಿಐ ಲೋಕಾಪುರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ನಡೆದ ದುರ್ಘಟನೆ ಬೆಳಕಿಗೆ ಬಂದಿದೆ.
ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಿಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
Leave a Comment