ಹೊನ್ನಾವರ . ಕರ್ನಾಟಕ ಸರ್ಕಾರ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ (ರಿ.), ಶ್ರೀಕ್ಷೇತ್ರ ಬಂಗಾರಮಕ್ಕಿ ಇವರ ಆಶ್ರಯದಲ್ಲಿ ಅಮೃತಧಾರಾ ಗೋಶಾಲೆಯ ನೂತನ ಕಟ್ಟಡ ಲೋಕಾರ್ಪಣೆಗೊಂಡಿತು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ|| ಬಸವರಾಜ್ರವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರು ಗೋವುಗಳನ್ನು ಕೇವಲ ವ್ಯಾವಹಾರಿಕವಾಗಿ ಮಾತ್ರ ಬಳಸಿಕೊಳ್ಳಬಾರದು, ಅದು ನಮ್ಮ ಜೀವನದ ಭಾಗವಾದುದು ಹಾಗಾಗಿ ಗೋವುಗಳನ್ನು ಮಾತೃಭಾವದಿಂದ ಪೂಜಿಸಬೇಕು, ಗೋಮೂತ್ರ, ಸಗಣ , ಕ್ಷೀರ ಪ್ರತಿಯೊಂದೂ ನಮ್ಮ ಜೀವನದ ಬಳಕೆಯಲ್ಲಿರುವುದು ಎಂದು ತಮ್ಮ ಆಶೀರ್ವಾದ ನುಡಿಗಳನ್ನಾಡಿದರು.
ಪರೋಕ್ಷವಾಗಿ ಕೃಷಿ ಸಂಸ್ಕøತಿಯನ್ನು ಶ್ರೀಕ್ಷೇತ್ರ ಬೆಂಬಲಿಸುತ್ತಿದೆ ಎನ್ನುವುದಕ್ಕೆ ಈ ಗೋಶಾಲೆ ಪ್ರಾರಂಭವಾಗಿದೆ. ಗೋವುಗಳ ಮೂರ್ತಿರೂಪವೇ ಶ್ರೀಕೃಷ್ಣ, ಗೋವಿನಲ್ಲಿರುವ ಮುಗ್ಧತೆಯಿಂದ ನಮ್ಮೆಲ್ಲರ ಮನಸ್ಸು ಶುದ್ಧವಾಗುವುದು ಎಂದು ಅರವಿಂದ ಕರ್ಕಿಕೋಡಿಯವರು ತಮ್ಮ ನುಡಿಗಳ ಮೂಲಕ ತಿಳಿಸಿದರು.
ಕಾರ್ಯಕ್ರಮದಲ್ಲಿ ಹೊನ್ನಾವರ ಆಟೋಚಾಲಕರ ಸಂಘದ ಅಧ್ಯಕ್ಷರಾದ ಶಿವರಾಜ ಮೇಸ್ತ ಹಾಗೂ ನಗರಬಸ್ತಿಕೇರಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಅನ್ನಪೂರ್ಣ ಶಾಸ್ತ್ರಿ ಉಪಸ್ಥಿತರಿದ್ದರು. ಗಣಪತಿ ಹೆಗಡೆ ಹಾಗೂ ಶ್ವೇತಾ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.
Leave a Comment