ಹೊನ್ನಾವರ:ನ್ಯಾಕ್ ಪ್ರಾಯೋಜಿತ 2 ದಿನಗಳ ವಿಚಾರ ಸಂಕೀರ್ಣ ಇಲ್ಲಿಯ ಎಂ.ಪಿ.ಇ.ಸೊಸೈಟಿಯ ಎಸ್.ಡಿ.ಎಂ. ಕಾಲೇಜಿನಲ್ಲಿ ಫೆ.15 ಹಾಗೂ 16ರಂದು ನಡೆಯಲಿದೆ.
ನ್ಯಾಕ್ ಮಾನ್ಯತೆ ನಂತರದ ಗುಣಮಟ್ಟ ಸುಧಾರಣಾ ನೋಟ'(Quality improvement in Post Accreditation Scenario) ಎನ್ನುವ ವಿಷಯದ ಕುರಿತು ನಡೆಯುವ ಪ್ರಸ್ತುತ ವಿಚಾರ ಸಂಕೀರ್ಣವನ್ನು ಕಾಲೇಜಿನ ಐಕ್ಯುಎಸಿ ಘಟಕ ಸಂಘಟಿಸಿದೆ.
ಎಂಪಿಇ ಸೊಸೈಟಿಯ ಅಧ್ಯಕ್ಷ ಡಾ.ಎಂ.ಪಿ.ಕರ್ಕಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಡಾ.ಪಿ.ಕಣ್ಣನ್ ದಿಕ್ಸೂಚಿ ಭಾಷಣ ಮಾಡುವರು.ಪ್ರಾಚಾರ್ಯೆ ಡಾ.ವಿಜಯಲಕ್ಷ್ಮಿ ಎಂ.ನಾಯ್ಕ ಅಧ್ಯಕ್ಷತೆ ವಹಿಸುವರು.
ವಿಚಾರ ಸಂಕೀರ್ಣದಲ್ಲಿ 4 ವಿವಿಧ ಗೋಷ್ಠಿಗಳು ನಡೆಯಲಿದ್ದು ಡಾ.ಗಣೇಶ ಭಟ್ಟ,ಡಾ.ಜಿ.ಎಸ್.ಭಟ್ಟ,ಡಾ.ಆರ್.ಜಿ.ಹೆಗಡೆ ಹಾಗೂ ಡಾ.ದಿಲೀಪ ಅರೋಲ್ಕರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.ವಿವಿಧ ಕಾಲೇಜುಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ ನಡೆಯಲಿದೆ’ ಎಂದು ಪ್ರಾಚಾರ್ಯೆ ಡಾ.ವಿಜಯಲಕ್ಷ್ಮಿ ಎಂ.ನಾಯ್ಕ ಹಾಗೂ ಐಕ್ಯುಎಸಿ ಸಂಚಾಲಕ ಡಾ.ವಿ.ಎಂ.ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment