ಹೊನ್ನಾವರ;
.
ಸ.ಹಿ.ಪ್ರಾ.ಶಾಲೆ ಬೆಳ್ಳುಕುರ್ವಾ ಇಲ್ಲಿಯ ವಾರ್ಷಿಕ ಸ್ನೇಹ ಸಮ್ಮೆಲನ ಜರುಗಿತು ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಪೀಟರ ಮೆಂಡೀಸ ರವರು ಉದ್ಘಾಟನೆ ಮಾತನಾಡುತ್ತ, ಇವತ್ತು ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಶಿಕ್ಷಣ ದೊರೆಯುತ್ತಿದೆ. ಸರ್ಕಾರ ಶಿಕ್ಷಣಕ್ಕಾಗಿ ಬಹಳಷ್ಟು ಖರ್ಚು ಮಾಡುತ್ತಿದೆÉ. ಇಂಗ್ಲೀಷ ವ್ಯಾಮೋಹಕ್ಕೆ ಬಲಿಯಾಗದೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿ ಇವತ್ತು ಬೇರೆ ಬೇರೆ ಶಾಲೆಗಳಲ್ಲಿ ಸಾಧನೆ ಮಾಡಿದಾದರು ಸರ್ಕಾರಿ ಶಾಲೆಗಳಲ್ಲಿ ಕಲಿತು ಹೋದವರೇ ಹೆಚ್ಚು. ಮಾತೃಭಾಷೆಯ ಶಿಕ್ಷಣ ಗಟ್ಟಿತನದಿಂದ ಕೂಡಿರುತ್ತದೆ ಎಂದು ಹೇಳಿದರು. ಬೆಳ್ಳುಕುರ್ವಾ ಶಾಲೆ ನಮ್ಮ ಗ್ರಾಮದಲ್ಲೆ ಅತ್ಯುತ್ತಮ ಶಾಲೆ ಎಂದು ಹೊಗಳಿದರು.
ಹಸ್ತಪತ್ರಿಕೆ ಉದ್ಘಾಟನೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನ್ಯಾಯವಾದಿಗಳಾದ ಉಮಾ ನಾಯ್ಕ ಮಾತನಾಡಿ. ನಮ್ಮ ಕಲೆ, ಸಂಸ್ಕøತಿ, ಪರಂಪರೆಯನ್ನು ಉಳಿಸುವ ಶಿಕ್ಷಣ ಅಗತ್ಯ ಇದೆ. ಇಂದಿನ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಬೇಕಾಗಿದೆ. ಇದು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಸಾಧ್ಯ. ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಶಿಕ್ಷಕರಿದ್ದಾರೆ ಹಾಗೆ ಉತ್ತಮ ಸೌಲಭ್ಯವು ಕೂಡ ದೊರುತ್ತಿದೆ. ಅದರ ಪ್ರಯೋಜನವನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಗೋವಿಂದ ಚಂದ್ರು ಗೌಡರವರು ವಹಿಸಿ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಿ ಪಡಿಸಿದರು.
ವೇದಿಕೆಯ ಮೇಲೆ ಸತೀಶ ನಾಯ್ಕ ಅಧ್ಯಕ್ಷರು ಪ್ರೌಢಶಾಲಾ ಶಿಕ್ಷಕರ ಸಂಘ ಆರ್.ಡಿ. ನಾಯ್ಕ ಶಿಕ್ಷಕರು ಸರಕಾರಿ ಪ್ರೌಢಶಾಲೆ ಹಡಿನಬಾಳ ಶಿವಾನಂದ ಹೆಗಡೆ ಸಿ.ಆರ್.ಪಿ, ವ್ಹಿ.ಡಿ.ಯಾಜಿ, ಮಮತಾ ನಾಯ್ಕ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮುಖ್ಯಾಧ್ಯಾಪಕರಾದ ಎಂ. ಜಿ. ನಾಯ್ಕ ಸ್ವಾಗತಿಸಿದರು. ಪ್ಲೋರಿನಾ ರೊಡ್ರಿಗಸ್ ವರದಿ ವಾಚಿಸಿದರು. ಸುವರ್ಣ ಗೊನ್ಸಾಲ್ವೀಸ್ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಆಯ್.ಎಚ್.ಗೌಡ, ಶಿಕ್ಷಕರು ವಂದಿಸಿದರು. ಉದಯ ನಾಯ್ಕ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು. ನಂತರ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.
Leave a Comment