ಹಳಿಯಾಳ :- ವೀರ ಯೋಧರ ರಕ್ತ ಹರಿಸಿದ ದುಷ್ಟ ಪಾಕಿಗಳ ರಕ್ತವನ್ನು ಹರಿಸಲು ನಾವು ಬಯಸುತ್ತೇವೆ. ಭಾರತ ಸರ್ಕಾರ ಹುತಾತ್ಮ ಸೈನಿಕರಿಗೆ ನ್ಯಾಯ ಒದಗಿಸಲು ಪಾಕಿಸ್ತಾನ ಪೋಷಿತ ಉಗ್ರರಿಗೆ ತಕ್ಕ ಪಾಠ ಕಲಿಸಲು ಕಠೋರವಾದ ಹೆಜ್ಜೆಯನ್ನು ಮುಂದಿಡಬೇಕೆಂದು ಮಾಜಿ ಸೈನಿಕರು ಆಗ್ರಹಿಸಿದ್ದಾರೆ.
ಗುರುವಾರ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧರಿಗೆ ಶೃದ್ದಾಂಜಲಿ ಸಲ್ಲಿಸಿದ ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಮಾಜಿ ಸೈನಿಕರ ಸಂಘದ ಹಳೀಯಾಳ ಘಟಕದವರು ಘಟನೆಯಲ್ಲಿ ಗಾಯಗೊಂಡ ಯೋಧರು ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥೀಸಿದ್ದಾರೆ.
ಐಎಸ್ಐ ಸಂಘಟನೆಯ ಕುಮ್ಮಕ್ಕು ಜೈಶ್ ಎ ಮೊಹಮ್ಮದ ಸಂಘಟನೆಗಿದ್ದು ಇವರೆಲ್ಲರಿಗೆ ಪಾಕಿಸ್ತಾದ ಪರೋಕ್ಷ ಬೆಂಬಲವಿದೆ ಎಂಬುದು ಪದೆ ಪದೆ ಸಾಬಿತಾಗಿದ್ದು ಇಂತಹ ಹೇಯ ಮನಸ್ಥಿತಿಯವರಿಗೆ ಉತ್ತರ ಕೊಡುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡಬಾರದೆಂದು ಅವರು ವಿನಂತಿಸಿದ್ದಾರೆ.
Leave a Comment