ಹಳಿಯಾಳ :- ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ಪೈಶಾಚಿಕ ದಾಳಿಯನ್ನು ಖಂಡಿಸಿ ಹಾಗೂ ಹುತಾತ್ಮ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಸಲು ಹಳಿಯಾಳದ ಸಮಸ್ತ ಸಮಾಜದವರು ಹಾಗೂ ಎಲ್ಲ ಪಕ್ಷದವರು, ಸಂಘಟನೆಯವರು ಭಾನುವಾರು ಸಾಯಂಕಾಲ ನಡೆಸಿದ ಶೃದ್ದಾಂಜಲಿ ಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಪಾಕಿಸ್ತಾನವನ್ನು ನಿರ್ನಾಮ ಮಾಡುವಂತೆ ಘೊಷಣೆ ಮೊಳಗಿಸಿದರು.
ಹಿಂದೂ-ಮುಸ್ಲಿಂ-ಕ್ರೀಶ್ಚಿಯನ್-ಜೈನ್ ಧರ್ಮದವರು, ಜಾತ್ಯಾತೀತವಾಗಿ ಹಾಗೂ ಎಲ್ಲ ರಾಜಕೀಯ ಪಕ್ಷದವರು, ಹತ್ತಾರು ಸಂಘಟನೆಯವರು ಶೃದ್ದಾಂಜಲಿ ಯಾತ್ರೆಯಲ್ಲಿ ಮೆಣದ ಬತ್ತಿಗಳನ್ನು ಹಿಡಿದು ಪಾಲ್ಗೊಂಡಿದ್ದರು.
ಎಲ್ಲ ಸಮುದಾಯದವರು ತಮ್ಮ ಪ್ರಾರ್ಥನಾ ಮಂದಿರ, ದೇವಸ್ಥಾನಗಳಲ್ಲಿ ಸೈನಿಕರಿಗಾಗಿ ಪ್ರಾರ್ಥಿಸಿ ಅಲ್ಲಿಂದ ಮೆಣದ ಬತ್ತಿಗಳನ್ನು ಹಿಡಿದು ಮೆರವಣ ಗೆ ಮೂಲಕ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತ (ಅರ್ಬನ್ ಬ್ಯಾಂಕ್ ಸರ್ಕಲ್) ನಲ್ಲಿ ಜಮಾಯಿಸಿದರು. ಇಲ್ಲಿ ಎಲ್ಲರೂ ಒಟ್ಟಾಗಿ ಬೃಹತ್ ಶೃದ್ದಾಂಜಲಿ ಯಾತ್ರೆಯ ಮೂಲಕ ಪಟ್ಟಣದ ಮುಖ್ಯ ಮಾರುಕಟ್ಟೆ ಮಾರ್ಗವಾಗಿ ಶೀವಾಜಿ ವೃತ್ತಕ್ಕೆ ಆಗಮಿಸಿ ಸಭೆ ಸೇರಿದರು.
ಇಲ್ಲಿ ಸಾವಿರಾರು ಜನ ಮೆಣದ ಬತ್ತಿಗಳನ್ನು ಬೆಳಗಿಸಿ ಸೈನಿಕರ ಹಾಗೂ ದೇಶದ ಪರ ಘೊಷಣೆಗಳನ್ನು ಕೂಗಿ ದೇಶಕ್ಕಾಗಿ ನಾವೆಲ್ಲ ನಿಮ್ಮೊಂದಿಗಿದ್ದೇವೆ ಎನ್ನುವ ಘೊಷಣೆಗಳನ್ನು ಮೊಳಗಿಸಿದರು.
ಪಾಕಿಸ್ತಾನದ ವಿರುದ್ದ ಘೊಷಣೆಗಳಂತೂ ಮುಗಿಲು ಮುಟ್ಟುವಂತಿತ್ತು. ಅಲ್ಲದೇ ಯುವಕರು ಪಾಕಿಸ್ತಾನದ ಧ್ವಜವನ್ನು ಇದೆ ಸಂದರ್ಭದಲ್ಲಿ ಸುಟ್ಟು ತಮ್ಮ ಆಕ್ರೊಶವನ್ನು ಹೊರ ಹಾಕಿದರು. ಪಕ್ಷಾತೀತವಾಗಿ ಹಾಗೂ ಎಲ್ಲ ಸಮಾಜದವರು ದೇಶಕ್ಕಾಗಿ ಒಂದಾಗಿ ನಡೆಸಿದ ಕಾರ್ಯಕ್ರಮ ಯಶಸ್ವಿಯಾಯಿತು.
Leave a Comment