ಹಳಿಯಾಳ:- ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ, ಹಳಿಯಾಳದ ಆಶ್ರಯದಲ್ಲಿ ಫೆಬ್ರುವರಿ 21 ಮತ್ತು 22ರಂದು ಸಿವಿಲ್ ಇಂಜನಿಯರಿಂಗ್ ಕ್ಷೇತ್ರದಲ್ಲಿ ಯೋಜನಾ ಕಾರ್ಯದ ನಿರ್ವಹಣೆಯ ಪಾತ್ರ (Role of Enerprise Portfolio Project Management in Civil Engineering) ಎಂಬ ವಿಷಯದ ಕುರಿತಾಗಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಡಾ|| ವಿ.ವಿ ಕಟ್ಟಿ ತಿಳಿಸಿದ್ದಾರೆ.
ಮಹಾವಿದ್ಯಾಲಯದ ಸಿವಿಲ್ ಇಂಜನಿಯರಿಂಗ್ ವಿಭಾಗವು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ದಿ.21 ರಂದು ಮುಂಜಾನೆ 9:30ಕ್ಕೆ ಉದ್ಘಾಟನೆಗೊಳ್ಳಲಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕರಿಸಿದ್ದಪ್ಪನವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಗೌರವಾಧ್ಯಕ್ಷರಾಗಿ ಹುಬ್ಬಳ್ಳಿಯ ಸ್ಮಾರ್ಟ ಸಿಟಿ ಯೋಜನೆಯ ಮುಖ್ಯ ಎಂಜಿನಿಯರ್ ಎಮ್ ನಾರಾಯಣ ಆಗಮಿಸಲಿದ್ದಾರೆ.
ನಿರ್ಮಾಣ ಕಾಮಗಾರಿಗಳ ವ್ಯವಸ್ಥಿತ ನಿರ್ವಹಣೆ, ಸಂಪನ್ಮೂಲಗಳ ಸದ್ಬಳಕೆ, ಆಧುನಿಕ ವಿಧಾನಗಳ ಬಳಕೆ, ಗುಣಮಟ್ಟ ಹಾಗೂ ಕಾರ್ಯಕ್ಷಮತೆಯ ಮಾಪನಗಳ ಕುರಿತು ಮಾಹಿತಿಯನ್ನು ನೀಡುವುದು ಈ ವಿಚಾರ ಗೋಷ್ಠಿಯ ಉದ್ದೇಶವಾಗಿದೆ. ಈ ಕುರಿತು ಹಲವಾರು ಉಪನ್ಯಾಸ ಕಾರ್ಯಕ್ರಗಳು ಮತ್ತು ಅವಶ್ಯಕ ಸಾಫ್ಟವೇರ್ಗಳ ಪ್ರಾಯೋಗಿಕ ತರಬೇತಿಗಳು ಜರುಗಲಿವೆ ಎಂದು ಕಟ್ಟಿ ಅವರು ತಿಳಿಸಿದ್ದಾರೆ.
Leave a Comment