ಹಳಿಯಾಳ:- ಸಾಮಾಜಿಕ ಶೈಕ್ಷಣ ಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿರುವ ಸಿದ್ದೇಶ್ವರ ಸ್ವಾಮೀಜಿಗಳು ಒಂದು ತಿಂಗಳ ಕಾಲ ಹಳಿಯಾಳದಲ್ಲಿದ್ದು ಆಧ್ಯಾತ್ಮಿಕ ಪ್ರವಚನವನ್ನು ನೀಡುತ್ತಿರುವುದು ನಮ್ಮೆಲ್ಲರ ಭಾಗ್ಯವೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ನುಡಿದಿದ್ದಾರೆ.
ಪ್ರವಚನ ಕಾರ್ಯಕ್ರಮದ ಉಧ್ಗಾಟನೆಯಲ್ಲಿ ಕಾರಣಾಂತರಗಳಿಂದ ಪಾಲ್ಗೊಳ್ಳದ ಅವರು ಪತ್ರಿಕಾ ಹೇಳಿಕೆ ಮೂಲಕ ಶುಭ ಸಂದೇಶವನ್ನು ನೀಡಿದ್ದು ಸಾಮಾಜಿಕ ಭೇದ ಭಾವಗಳು ವ್ಯಾಪಿಸುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಮಹಾಪರುಷರ ಮಾತುಗಳು ಜನತೆಯಲ್ಲಿ ಆಶಾಕಿರಣವನ್ನು ಮೂಡಿಸುವಲ್ಲಿ ಪ್ರಯೋಜನಕಾರಿಯಾಗುತ್ತವೆ ಎಂದಿದ್ದಾರೆ.
ಸಿದ್ದೇಶ್ವರ ಸ್ವಾಮೀಜಿಯವರ ನುಡಿಗಳಿಗೆ ಸಾರ್ವಜನಿಕರು ಅತ್ಯಂತ ಗೌರವವನ್ನು ನೀಡುತ್ತಿರುವುದು, ಸಮಾಜದಲ್ಲಿ ಅವರ ಪ್ರಾಮುಖ್ಯವನ್ನು ತೋರಿಸುತ್ತದೆ. ಇಂತಹ ಮಹಾನ್ ಸಿದ್ಧಿ ಪುರುಷರ ಮಾರ್ಗದರ್ಶನ ಹಾಗೂ ಸಂಸ್ಕøತ, ಸಂಸ್ಕಾರ ಹಾಗೂ ಯೋಗ ಶಿಬಿರಗಳಿಂದ ನಮ್ಮ ಜನತೆ ಉತ್ತಮವಾದ ಜೀವನ ಮಾರ್ಗವನ್ನು ಕಂಡುಕೊಳ್ಳಲೆಂದು ಹಾರೈಸುತ್ತೇನೆ ಎಂದು ಅವರು ಹೇಳಿದ್ದಾರೆ.
Leave a Comment