ಹೊನ್ನಾವರ; ನಮ್ಮ ದೇಶದ ಯೋಧರನ್ನು ಹತ್ತೆ ಗೈದ ಅಮಾನುಸ ಕೃತ್ಯವನ್ನು ಖಂಡಿಸಿ ತಾಲೂಕಿನ ಮಂಕಿ ಮುಸ್ಲಿಮ್ ಸಮುದಾಯದವರು ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.
ಮಂಕಿಯ ಜಮಾತುಲ್ ಮುಸ್ಲಿಮಿನ್ ಜಾಮೀಯಾ ಮಸ್ಜಿದ್ ಹಾಗೂ ನಾಕುದಾ ಮೊಹಲ್ಲಾ ಜಮಾತಿನ ಪಧಾಧಿಕಾರಿಗಳು ತಹಶೀಲ್ದಾರರ ಕಛೇರಿಗೆ ಆಗಮಿಸಿ ಕಾಶ್ಮೀರದಲ್ಲಿ ನಡೆದ ಪುಲ್ವಾಮಾ ದಾಳಿಯನ್ನು ಖಂಡಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಹಿರಿಯ ಮುಖಂಡರಾದ ಹಸನ್ಬಾಬಾಪಾರವರು ಮಾತನಾಡಿ ಕಾಶ್ಮೀರಾದಲ್ಲಿ ನಡೆದಿರುವು ಅಮಾನುಷ ಕೃತ್ಯ.
ಮಂಕಿಯ ಮುಸ್ಲಿಮ ಎಲ್ಲಾ ಸಂಘಸಂಸ್ಥೆಗಳು ಉಗ್ರವಾಗಿ ಖಂಡಿಸುತ್ತೆವೆ. ಇ ಕೃತ್ಯದಲ್ಲಿ ಹುತಾತ್ಮರಾದ ಯೋಧರ ಅತ್ಮಕ್ಕೆ ಚಿರಶಾಂತಿ ಕೋರುತ್ತೆವೆ. ದು;ಖತಪ್ತ ಎಲ್ಲಾ ಮೃತ ಕುಟುಂದವರೊಂದಿಗೆ ತಾವು ಸಹಭಾಗಿಯಾಗಿದ್ದೇವೆ ಎಂದು ಮೃತ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸಿದರು. ಮಂಕಿ ಮುಸ್ಲಿಮ ಸಂಸ್ಥೆಗಳ ಪರವಾಗಿ ಜಮಾತುಲ್ ಮುಸ್ಲಿಮಿನ್ ಜಾಮೀಯಾ ಮಸ್ಜಿದ್ ಮಂಕಿಯ ಅಧ್ಯಕ್ಷ ಖಾಜಿ ಮೊಹಮ್ಮದ್ ಇರಸಾದ್, ಉಪಾಧ್ಯಕ್ಷ ಹಸನ್ ಶಬ್ಬಿರ್ ಕಡ್ಪಾಡಿ , ಕಾರ್ಯದರ್ಶಿ ಅಹಮ್ಮದ ಬಾಷಾ ಅಭಿದಾ ಹಾಗೂ ನಾಕುದಾಮೊಹಲ್ಲಾ ಮುಸ್ಲಿಮ ಜಮಾತಿನ್ ಅಧ್ಯಕ್ಷ ಹಫಿಝಾ ಮನವಿ ಅರ್ಪಿಸಿದರು.
Leave a Comment