ಮಧ್ಯಪ್ರದೇಶ ಕರ್ನಾಟಕ ಸೇರಿದಂತೆ ದೇಶದ ವಿವಿದಡೆ ಹಿಂದೂಗಳ ಹತ್ಯೆ ತನಿಖೆಯನ್ನು ಕೇಂದ್ರೀಯ ತನಿಖಾದಳಕ್ಕೆ ನೀಡುವಂತೆ ಹಿಂದೂ ಜನ ಜಾಗೃತಿ ಸಮಿತಿ ಹೊನ್ನಾವರ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ನಮೀತಾ ಕಾಮತ ಮಾತನಾಡಿ ಕಳೆದ ಕೆಲ ವರ್ಷಗಳಿಂದ ಹಿಂದೂಪರ ನಾಯಕರ ಹತ್ಯೆ ಹಾಗೂ ಹಿಂದೂ ಮುಖಂಡರಮೇಲೆ ಹಲ್ಲೆಗಳು ಹೆಚ್ಚುತ್ತಿದೆಯಾದರೂ ಈ ಪ್ರಕರಣಗಳ ವಿಚಾರಣೆಯನ್ನು ಮಾಡಲು ರಾಜ್ಯ ಸರಕಾರ ವಿಫಲವಾಗಿದ್ದು, ಈ ಘಟನೆಗಳ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ವಹಿಸಬೇಕು. ಮದರಸಾಗಳು ಹಾಗೂ ಭಯೋತ್ಪಾದನಾ ಮೂಲವಾಗಿರುವ ಸಂಘಟನೆಗಳ ನಡುವಿನ ಸಂಬಂಧದ ಬಗ್ಗೆ ಆಳವಾದ ತನಿಖೆ ನಡೆಸಬೇಕು ಹಾಗೂ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ನೋಡಿ ಅದನ್ನು ತಕ್ಷಣವೇ ನಿಷೇಧಿಸಬೇಕು ಎಂದು ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ
ಈ ಸಂಧರ್ಭದಲ್ಲಿ ವಿನಾಯಕ ವಂದೂರಕರ, ಮಹೇಶ ಆಚಾರ್ಯ, ಎಮ್. ಡಿ. ನಾಯ್ಕ, ಜಿ.ಟಿ.ಭಟ್, ಗೀತಾ ವಂದೂರಕರ, ವಾಸಂತಿ ಮುರ್ಡೆಶ್ವರ, ಜಯಲಕ್ಮೀ ಕಲ್ಗಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Leave a Comment