ಹೊನ್ನಾವರ: ಅಂಕ ಗಳಿಕೆಯಿಂದ ಮಾತ್ರ ಯಶಸ್ಸು ಸಾಧ್ಯವಿಲ್ಲ.ಉತ್ತಮ ಸಂವಹನಾ ಕೌಶಲ್ಯ ಹಾಗೂ ಆತ್ಮವಿಶ್ವಾಸವಿದ್ದರೆ ಬದುಕಿನನಲ್ಲಿ ಹೆಚ್ಚಿನ ಸಾಧನೆ ಮಾಡಬಹುದು’ ಎಂದು ಧಾರವಾಡದ ಖ್ಯಾತ ಸಾಹಿತಿ ಮತ್ತು ಚಿಂತಕ ಶ್ರೀನಿವಾಸ ವಾಡಪ್ಪಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಲ್ಲಿನ ಎಸ್.ಡಿ.ಎಂ. ಕಾಲೇಜಿನಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. “ನಮ್ಮೆಲ್ಲ ಸಾಧನೆ ಹಾಗೂ ಸೋಲಿಗೆ ಮನಸ್ಸೇ ಕಾರಣ. ಯಶಸ್ಸು ಗಳಿಸಲು ಧನಾತ್ಮಕ ಮೌಲ್ಯ ಚಿಂತನೆ ಬೆಳಸಿಕೊಳ್ಳಿ ಎಂದು ಸಲಹೆ ನಿಡಿದರು. ವಿದ್ಯಾರ್ಥಿಗಳು ಹತಾಶರಾಗಬೇಡಿ,ನಿರಾಶರಾಗಬೇಡಿ ಜೀವನ ಮೌಲ್ಯಗಳ ಬಗ್ಗೆ ಪರಂಪರೆಯ ಬಗ್ಗೆ ಆತ್ಮ ವಿಶ್ವಾಸವಿದ್ದರೆ ಜೀವನದಲ್ಲಿ ಎನನ್ನು ಸಾಧಿಸಬಹುದೆಂಬ ಜೀವನ ಸ್ಪೂರ್ತಿ ಇರಲಿ ಹೊಸ ಮೌಲ್ಯ ಕೊಡುವ ಅಸಾಧಾರಣ ಶಕ್ತಿ ಸಿಗಲಿ ವಿದ್ಯಾರ್ಥಿಗಳ ಜೀವನ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಧಾರವಾಡದ ಮಲ್ಲಸಜ್ಜನ ವ್ಯಾಯಾಮ ಮತ್ತು ಆರೋಗ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಆನಂದ ನಾಡಿಗೇರ ಮಾತನಾಡಿ “ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಷಯಗಳ ಸತ್ಯಾಸತ್ಯತೆಯನ್ನು ಅರಿಯದೆ ಅವುಗಳನ್ನು ಒಪ್ಪಿಕೊಳ್ಳುವುದು ಅಪಾಯಕಾರಿ'”ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಜಾಗೃತೆಯಿರಲಿ ಎಂದು ಯುವ ಜನತೆಯನ್ನು ಎಚ್ಚರಿಸಿದರು. “ನಾವು ತಿಳಿದುಕೊಂಡಿದ್ದೇ ಸರಿ ಎಂಬ ಭಂಡತನ ಪ್ರಗತಿಗೆ ಮಾರಕ.ವಿನಯ ಹಾಗೂ ಸೋಲನ್ನು ಸ್ವೀಕರಿಸುವ ಕ್ರೀಡಾಮನೋಭಾವ ಅಗತ್ಯ’ ಎಂದು ಅವರು ಸಲಹೆ ನೀಡಿದರು.ಸಂಸ್ಕ್ರತಿ ಎಂದರೆ ತನ್ನನ್ನು ತಾನು ಹೇಗೆ ಅಭಿವ್ಯಕ್ತಿಗೊಳಿಸಿಕೊಳ್ಳುವುದು ಎನ್ನುವುದಾಗಿದೆ ಎಲ್ಲರು ಉತ್ತಮ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಿ ಎಂದು ಕರೆ ನೀಡಿದರು.
ಇದೇ ಸಂದ¨ರ್sದಲ್ಲಿ ಶರಾವತಿ ವಾರ್ಷಿಕ ಸಂಚಿಕೆ ಬಿಡುಗಡೆಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತ ವಹಿಸಿದ ಪ್ರಾಚಾರ್ಯೆ ಡಾ.ವಿಜಯಲಕ್ಷ್ಮಿ ಎಂ.ನಾಯ್ಕ ಮಾತನಾಡಿ,”ಶಿಕ್ಷಕರಿಗೆ ಹೃದಯವಂತಿಕೆ ಹಾಗೂ ವಿದ್ಯಾರ್ಥಿಗಳಿಗೆ ವಿನಯ ಬೇಕು’ ಎಂದು ಹೇಳಿದರು.
ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷ ಡಾ.ಎಂ.ಪಿ.ಕರ್ಕಿ, ಕಾರ್ಯದರ್ಶಿ ಎಸ್.ಎಂ.ಭಟ್ಟ, ಪ್ರೊ.ಆರ್.ಕೆ.ಮೇಸ್ತ, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಸಚಿನ್ ದೇವಾಡಿಗ,ಸುಬ್ರಹ್ಮಣ್ಯ ನಾಯ್ಕ,ಸಚಿನ್ ಭಟ್ಟ ಉಪಸ್ಥಿತರಿದ್ದರು.
Leave a Comment