haliyal:-
ಕಾನೂನು ಜ್ಞಾನವಿಲ್ಲದ ವಿದ್ಯಾವಂತರೂ ಸಹ ಅನೇಕ ಬಾರಿ ಶೋಷಣೆಗೆ ಒಳಗಾಗುತ್ತಾರೆ ಶೋಷಣೆಯನ್ನು ತಡೆಯಬೇಕಾದರೆ ಜನಸಾಮಾನ್ಯರು ದೈನಂದಿನ ಕಾನೂನನ್ನು ಹೊಂದುವುದು ತೀರಾ ಅಗತ್ಯ ವೆಂದು ನ್ಯಾಯಾಧೀಶೆ ಶಿಲ್ಪಾ ಎಚ್ ಎ ಹೇಳಿದರು. ಮಂಗಳವಾರದಂದು ಇಲ್ಲಿನ ತಹಶೀಲ್ದಾರ ಕಾರ್ಯಾಲದ ಸಭಾ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ, ಕಂದಾಯ ಹಾಗೂ ವಿವಿಧ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರು ದೈನಂದಿನ ಕಾನೂನನ್ನು ಅರಿತು ಸಮಾಜದಲ್ಲಿ ಆಗುವ ಅಪರಾಧ ತಡೆಗಟ್ಟುವಲ್ಲಿ ಸಹಕರಿಸಿರಿ ಮಹಿಳೆಯರು ತಮ್ಮ ಹಕ್ಕುಗಳನ್ನು ಕಾನೂನು ರಿತ್ಯ ಅರಿತು ಪಡೆಯಿರಿ. ವ್ಯಾಜ್ಯಗಳನ್ನು ದಾಖಲಿಸುವ ಮುನ್ನ ರಾಜಿಸಂದಾನದ ಮೂಲಕ ಪರಸ್ಪರವಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಿರಿ ಎಂದು ಲೋಕ ಅದಾಲತ್ ಹಾಗೂ ಕಾನೂನು ಪ್ರಾಧಿಕಾರ ಸೇವಾದಿಂದ ಸಿಗುವ ಕಾನೂನು ಸೌಲಭ್ಯದ ಕುರಿತು ವಿವರಿಸಿದರು.
ನ್ಯಾಯಧೀಶ ಬಸವರಾಜ ಸನದಿ ಮಾತನಾಡಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ತಾಲೂಕಿನಾದ್ಯಂತ ಮೂರು ದಿನಗಳ ಕಾಲ ಜಾಥಾ ಸಂಚರಿಸಲಿದೆ ಜಾಥಾದ ಸದುಪಯೋಗ ಪಡೆದುಕೊಳ್ಳಿ ಮತದಾನದ ಹಕ್ಕು ಸಹ ಪ್ರಾಮುಖ್ಯ, ದೇಶ ಮುನ್ನಡೆಸುವಲ್ಲಿ ಒಳ್ಳೆಯ ಅಭ್ಯರ್ಥಿಗಳಿಗೆ ನಿಮ್ಮ ಮತದಾನದ ಹಕ್ಕು ಚಲಾಸಿವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯ ಎಂದು ವಿವಿಧ ಕಾನೂನುಗಳ ಕುರಿತು ವಿವರಿಸಿದರು.
ಸಹಾಯಕ ಸರಕಾರಿ ವಕೀಲ ಅಜಿತ್ ಜನಗೌಡಾ, ಪೊಲೀಸ್ ದೂರು, ವಕೀಲ ಸಂಗೀತಾ ಕಾಮ್ರೇಕರ ಜೀವನಾಂಶ ಮಹಿಳೆ ಆಸ್ತಿಯ ಹಕ್ಕು ಕುರಿತು ಉಪನ್ಯಾಸ ನೀಡಿದರು. ತಹಶೀಲ್ದಾರ ವಿದ್ಯಾಧರ ಗುಳಗುಳಿ, ಸಿಪಿಆಯ್ ಬಿ ಎಸ್ ಲೋಕಾಪುರ ಉಪಸ್ಥಿತರಿದ್ದು ಮಾತನಾಡಿದರು. ವಕೀಲ ಸಂಘದ ಅಧ್ಯಕ್ಷ ಎ ಎಮ್ ಪಾಟೀಲ್, ತಾಲೂಕ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಡಾ. ಮಹೇಶ ಕುರಿಯರ. ವಕೀಲ ಎಮ್ ವಿ ಅಷ್ಟೇಕರ, ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ ಮತ್ತಿತರರು ಉಪಸ್ಥಿತರಿದ್ದರು, ರಮೇಶ ಪಾಟೀಲ್ ನಿರೂಪಿಸಿದರು. ಕಾರ್ಯಕ್ರಮದ ಮುನ್ನ ಕಾನೂನು ಸೇವಾ ಪ್ರಾಧಿಕಾರದ ಸಾಕ್ಷರತಾ ಜಾಥಾಕ್ಕೆ ಹಿರಿಯ ನ್ಯಾಯಾಧೀಶೆ ಶಿಲ್ಪಾ ಎಚ್ ಎ ಚಾಲನೆ ನೀಡಿದರು, ನ್ಯಾಯಾಧೀಶ ಬಸವರಾಜ ಸನದಿ ಮತ್ತಿತರರ ವಕೀಲ ಸಂಘದ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಮಾ. 6 ರಂದು ಬಿ.ಕೆ.ಹಳ್ಳಿ, ಬಾಣಸಗೇರಿ, ಲಯನ್ಸ ಸಂಸ್ಥೆ ಹಳಿಯಾಳ, ಮಾ.7 ರಂದು ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ, ಹವಗಿ, ಶಿವಾಜಿ ಗಲ್ಲಿ ಹಳಿಯಾಳ, ಮಾ.8 ರಂದು ಚವ್ಹಾಣ ಪ್ಲಾಟ್ನ ಶ್ರೀ ಶಕ್ತಿ ಭವನ, ನ್ಯಾಯಾಲಯದ ಆವರಣದಲ್ಲಿ ಕಾನೂನು ಸಾಕ್ಷರಥಾ ಜಾಥಾ ನಡೆಯಲಿದೆ.
Leave a Comment