ಹಳಿಯಳ :- ಇಂದು ಮನುಷ್ಯ ಅತಿಯಾದ ಆಸೆಗೆ ದಾಸನಾಗುತ್ತಿದ್ದಾನೆ. ಆಸೆಯೆ ದುಃಖಕ್ಕೆ ಮೂಲ ಎಂಬುದನ್ನು ಮನುಷ್ಯ ಅರಿತುಕೊಂಡು ಬಾಳಬೇಕಿದೆ ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಗಳು ಹೇಳಿದರು.
ಪಟ್ಟಣದ ಛತ್ರಪತಿ ಶೀವಾಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ ಪ್ರವಚನದಲ್ಲಿ ಸ್ವಾಮೀಜಿಗಳು ಮನುಷ್ಯ ಆಸೆ ಪಡಬೇಕು ಅದಕ್ಕೂ ಮಿತಿ ಇರಬೇಕು. ಅತಿಯಾದ ಆಸೆ ದುಃಖಕ್ಕೆ ಮೂಲವಾಗುತ್ತದೆ ಎಂದು ಭಗವಾನ್ ಬುದ್ದರ ಹಿತೋಪದೇಶಗಳು ಹಾಗೂ ಬಸವಣ್ಣವರ ವಚನಗಳ ಸಾರವನ್ನು ತಿಳಿಸಿ ಹೇಳುವ ಮೂಲಕ ಜೀವನದಲ್ಲಿ ಎಷ್ಟು ಬೆಕೋ ಅಷ್ಟೇ ಇಟ್ಟುಕೊಳ್ಳಿ, ಹೆಚ್ಚಿನದಕ್ಕೆ ಆಸೆ ಪಡಬೇಡಿ, ಆಸೆ-ದುರಾಸೆ ಎರಡು ಜೀವನದಲ್ಲಿ ದುಃಖಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಶ್ರೀಗಳು ತಿಳುವಳಿಕೆ ನೀಡಿದರು.
ಸಚಿವ ದೇಶಪಾಂಡೆ ಭೇಟಿ:- ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಬೆಳಿಗ್ಗೆಯ ಸಿದ್ದೇಶ್ವರ ಶ್ರೀಗಳ ಆಧ್ಯಾತ್ಮಿಕ ಪ್ರವಚನದಲ್ಲಿ ಪಾಲ್ಗೊಂಡು ಸ್ವಾಮೀಜಿಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ವಾಮೀಜಿಗಳು ಹಳಿಯಾಳದಲ್ಲಿ ಆಧ್ಯಾತ್ಮಿಕ ಪ್ರವಚನ ನಡೆಸಿಕೊಡುತ್ತಿರುವುದು ನಮ್ಮೆಲ್ಲರ ಪುಣ್ಯವಾಗಿದೆ. ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯೊಣ ಅವರು ತಿಳಿಸುವ ಸನ್ಮಾರ್ಗಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆಯುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಕರೆ ನೀಡಿದರು.
Leave a Comment