ಹಳಿಯಾಳ:- ಬೊಮ್ಮನಳ್ಳಿ ಗ್ರಾಮದ ಕಂಪಾರ್ಟಮೆಂಟ ನಂಬರ: ಐಎಕ್ಸ್-3 ರ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚಿ 1 ಎಕರೆ 10 ಗುಂಟೆ ಸುಟ್ಟು ಹಾನಿಯಾದ ಬಗ್ಗೆ ಬೆಂಕಿ ಹಚ್ಚಿದ ಆರೋಪಿಯನ್ನು ಸಾಂಬ್ರಾಣಿ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಬೆಂಕಿ ಪೆಟ್ಟಿಗೆಯನ್ನು ಜಪ್ತ ಪಡಿಸಿ ಯಲ್ಲಾಪುರದ ಹೊಸಳ್ಳಿ ಬೈಲುಂದರ ಗ್ರಾಮದ ಫಕೀರಸಾಬ್ ಬುಡ್ಡೆಸಾಬ ಡುಮಗೋಲಿಯನ್ನು ಬಂಧಿಸಿ ಕರ್ನಾಟಕ ಅರಣ್ಯ ಕಾಯ್ದೆ ಅಂತೆ ಗುನ್ನೆ ದಾಖಲಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ವಲಯ ಅರಣ್ಯಾಧಿಕಾರಿ ಸಾಂಬ್ರಾಣಿಯ ದೀಪಕ ನಾಯ್ಕ ನೇತ್ರತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಡಿ.ಎಸ್.ಹುಲ್ಯಾಳ, ಮತ್ತು ಅರಣ್ಯ ರಕ್ಷಕರುಗಳಾದ ಜೆ.ಎಚ್.ಮುಲ್ಲಾ, ಶಿವಲಿಂಗ ಕರಗಣ್ಣಿ ಕಾರ್ಯಾಚರಣೆ ನಡೆಸಿ ಅರೋಪಿಯನ್ನು ಬಂಧಿಸಿದ್ದಾರೆ.
Leave a Comment