ಹಳಿಯಾಳ:- ಯಾವುದೇ ಕೆಲಸವನ್ನು ಯಶಸ್ವಿಯಾಗಿ ನೇರವೇರಿಸಬೇಕಾದರೆ ಆತ್ಮಸ್ಥೆರ್ಯ ಮುಖ್ಯವಾಗಿದೆ ಹಾಗೂ ಮಹಿಳೆಯರು ತಾವೇ ಸ್ವತಃ ನಿರ್ಧಾರ ತೆಗೆದುಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ಯಶಸ್ಸಿನತ್ತ ದಾಪುಗಾಲು ಹಾಕಬಹುದು ಎಂದು ಹುಬ್ಬಳ್ಳಿಯ ಸೇಫ ಹ್ಯಾಂಡ್ಸ್ ಸಂಸ್ಥೆಯ ಸಂಸ್ಥಾಪಕ, ನಿರ್ದೇಶಕರಾದ ಎಮ್.ಎಸ್. ಶ್ರಾವಣಿ ಪವಾರ್ ಅಭಿಪ್ರಾಯಪಟ್ಟರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಹಳಿಯಾಳದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಾಗೂ ಸಮೃದ್ಧಿ ಮಹಿಳಾ ಒಕ್ಕೂಟದ ಉದ್ಘಾಟನೆಯನ್ನು ನೆರವೆರಿಸಿ ಅವರು ಮಾತನಾಡಿದರು.
ಧಾರವಾಡದ ಕರ್ಣಾಟಕಾ ಕಲಾ ಮಹಾವಿದ್ಯಾಲಯದ ಸಹಾಯಕ ಉಪನ್ಯಾಸಕರಾದ ಅರುಣಾ ಕಟ್ಟಿ ಮಾತನಾಡಿ ಮಹಿಳಾ ದಿನಾಚರೆಣೆಯು ಕೇವಲ ಒಂದು ದಿನ ಆಚರಣೆ ಮಾತ್ರವಾಗಬಾರದು. ಪ್ರತಿಯೊಬ್ಬ ಮಹಿಳೆ ಶಕ್ತಿ ಸಾಮರ್ಥ ಹೊಂದಿದ್ದು ತನ್ನಲ್ಲಿರುವ ಸಾಮಥ್ರ್ಯವನ್ನು ಜಗತ್ತಿಗೆ ತೊರಿಸಬೇಕು. ತಾಯಂದಿರು ತಮ್ಮಮಕ್ಕಳಿಗೆ ಸರಿಯಾದ ನೈತಿಕತೆಯನ್ನು ಒದಗಿಸುವುದರ ಮೂಲಕ ಉತ್ತಮ ಸಮಾಜಕ್ಕೆ ಶಕ್ತಿಯಾಗಬೇಕೆಂದು ಕರೆ ಕೊಟ್ಟರು.
ಸಂಸ್ಥೆಯ ನಿರ್ದೇಶಕ ನಿತ್ಯಾನಂದ ಆರ್ ವೈದ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಹೆಣ್ಣನ್ನು ನಾವೂ ಪಂಚಭೂತಗಳಿಗೆ ಸಮಾನವಾದ ಶಕ್ತಿಹೊಂದಿದ ಶಕ್ತಿರೂಪಿಣಿ ಎಂದು ಕರೆಯುತ್ತೇವೆ. ಮಹಿಳೆ ತಾಯಿಯಾಗಿ, ಹೆಂಡತಿಯಾಗಿ, ಸಹೋದರಿಯಾಗಿ, ಮಗಳಾಗಿ ಹೀಗೆ ಹತ್ತು ಹಲವು ರೂಪದಲ್ಲಿ ಪುರುಷನಿಗೆ ಮಾರ್ಗದರ್ಶನ ನೀಡುತ್ತಾಳೆ. ಹಾಗಾಗೀ ಮಹಿಳೆಯರನ್ನು ಗೌರವ ಭಾವನೆಯಿಂದ ಕಾಣಬೇಕೆಂದರು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಮಿಸ್ ಕರ್ನಾಟಕ ವಿಜೇತೆ ಪ್ರೀತಿ ಚೊರ್ಲೆಕರ್, ಡಾ:ರಷ್ಮೀ, ಸಮೃದ್ಧಿ ಮಹಿಳಾ ಒಕ್ಕೂಟದ ಉಪಾದ್ಯಕ್ಷೆ ಸುರೇಖಾ ಸುರೇಂದ್ರ ಬೆಂಡೆ, ರಷ್ಮೀ ಎಸ್, ಕುಮಾರಿ ಶಾಂತಾ ಜಮಾದಾರ, ವಿನಾಯಕ ಎ ಚವ್ಹಾಣ ಇದ್ದರು. ಸಂಸ್ಥೆಯ ವಿಷ್ಣು ಮಡಿವಾಳ ಕಾರ್ಯಕ್ರಮ ನಿರೂಪಿಸಿದರೇ ಯೋಜನಾಧಿಕಾರಿ ಸಂತೋಷ ಪರೀಟ ವಂದಿಸಿದರು.
Leave a Comment