ಹಳಿಯಾಳ:- ಕಾಂಗ್ರೇಸ್ ಪಕ್ಷದ ಉಕ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಅವರ ಮೇಲೆ ಆದಾಯ ತೆರಿಗೆ ಪ್ರಕರಣ ದಾಖಲಿಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಹಳಿಯಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ ಆರೋಪಿಸಿದ್ದಾರೆ.
ಮಂಗಳವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 10 ತಿಂಗಳ ಹಿಂದೆ ಭೀಮಣ್ಣ ನಾಯ್ಕ ಅವರ ಮೇಲೆ ಆದಾಯ ತೆರಿಗೆ ದಾಳಿ ಪ್ರಕರಣ ನಡೆದಿದ್ದು, ಈಗ 10 ತಿಂಗಳ ನಂತರ ಮತ್ತೆ ಅದೇ ಪ್ರಕರಣ ದಾಖಲಿಸಿರುವುದು ರಾಜಕೀಯ ದುರದ್ದೇಶವಾಗಿದೆ. ಭೀಮಣ್ಣ ಅವರು ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಾರೆ ಎನ್ನುವ ಭೀತಿಯಿಂದ ಈ ಪ್ರಕರಣವನ್ನು ಅನಾವಶ್ಯಕವಾಗಿ ದಾಖಲಿಸಲಾಗಿದೆ ಎಂದು ಅವರು ಕಿಡಿಕಾರಿದರು.
ಭೀಮಣ್ಣ ನಾಯ್ಕರವರು ಸರಳ ಸಜ್ಜನ ವ್ಯಕ್ತಿಯಾಗಿದ್ದು, ಯಾವುದೇ ಅವ್ಯವಹಾರಗಳಲ್ಲಿ ತೊಡಗಿಸಿಕೊಂಡವರಲ್ಲ. ಆಗ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಕೂಡ ಇದೇ ರೀತಿ ಆದಾಯ ತೆರಿಗೆ ದಾಳಿ ನಡೆಸಿರುವುದನ್ನು ನೋಡಿದರೆ ಇದು ರಾಜಕೀಯವಾಗಿ ಕುಗ್ಗಿಸುವ ದುರದ್ದೇಶ ಹೊಂದಿದ್ದು ಇದನ್ನು ಖಂಡಿಸುವುದಾಗಿ ಕೊರ್ವೆಕರ ಹೇಳಿದರು.
Leave a Comment