ಹಳಿಯಾಳ : ಇಂದಿನ ಯುವ ಜನಾಂಗ ಮೊಬೈಲ್, ಕಂಪ್ಯೂಟರ್, ಟಿವಿ ಮಾಧ್ಯಮಗಳಲ್ಲೇ ಕಾಲಹರಣ ಮಾಡುತ್ತಿದ್ದು. ಯುವಕರಲ್ಲಿ ಹೋರಾಟದ ಶಕ್ತಿ ಕುಂದುತ್ತಿದೆ ಎಂದು ಕಾಳಿ ಬ್ರೀಗೆಡ್ ಸಂಘಟನೆಯ ಮುಖ್ಯ ಸಂಚಾಲಕರಾದ ರವಿ ರೇಡಕರ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಮರಾಠಾ ಭವನದ ಪಕ್ಕ ನಡೆದ ಸಮಾರಂಭದಲ್ಲಿ ಕಾಳಿ ಬ್ರಿಗೇಡ್ ಹಳಿಯಾಳ ಶಾಖೆಯನ್ನು ಉಧ್ಘಾಟಿಸಿ ಮಾತನಾಡಿದ ಅವರು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಖ್ಯ ಪಾತ್ರ ವಹಿಸುವುದು. ಬಡವರ, ದಿನ-ದಲಿತರ ಧ್ವನಿಯಾಗಿ ಕಾರ್ಯನಿರ್ವಹಿಸುವುದು ಹಾಗೂ ಸಮಾಜ ಸೇವೆಯೇ ಸಂಘಟನೆಯ ಮುಖ್ಯ ಉದ್ದೇಶವಾಗಿದೆ. ಯಾವುದೇ ರಾಜಕಾರಣಕ್ಕೆ ಅವಕಾಶ ನೀಡದ ಏಕೈಕ ಸಂಘಟನೆ ಕಾಳಿ ಬ್ರಿಗೇಡ್ ಆಗಿದೆ ಎಂದರು.
ಪ್ರತಿಯೊಂದು ಇಲಾಖೆಗಳಲ್ಲಿ ಜನರಿಗಾಗಿ ಬರುವ ಯೋಜನೆಗಳ ಬಗ್ಗೆ ಮಾಹಿತಿ, ಪಿಡಿಓ, ಗ್ರಾಮ ಲೆಕ್ಕಾಧಿಕಾರಿಗಳು, ಆರ್.ಎಫ್ಓ ಇತರ ಅಧಿಕಾರಿಗಳ ಕೆಲಸವನ್ನು ಪ್ರತಿಯೊಬ್ಬ ಪ್ರಜೆ ತಿಳಿದುಕೊಂಡು ಸರ್ಕಾರದಿಂದ ಬರುವ ಯೋಜನೆಗಳ ಸದುಪಯೋಗ ಪಡೆಯಬೇಕಾಗಿದ್ದು ಜನರಿಗೆ ಸರಿಯಾದ ಮಾರ್ಗದರ್ಶನ ಮಾಡಲು ಸಂಘಟನೆ ಶ್ರಮಿಸಲಿದೆ ಎಂದರು.
ಹಳಿಯಾಳ ಶಾಖೆಯ ಮುಖ್ಯ ಸಂಚಾಲಕ ಸಂದೀಪಕುಮಾರ ಉಡಚಪ್ಪಾ ಬೋಬಾಟಿ ಮಾತನಾಡಿ ಹಳಿಯಾಳದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರದ ಉಚಿತ ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರತಿಯೊಂದು ಹಂತದಲ್ಲಿ ಹಣ ಪಡೆಯುವ ಮೂಲಕ ಜನರನ್ನು ಲೂಟಿ ಮಾಡಲಾಗುತ್ತಿದೆ ಎಂದು ಗಂಭೀರ ಆಪಾದನೆ ಮಾಡಿದ ಅವರು ಭ್ರಷ್ಟಾಚಾರ ನಿರ್ಮೂಲನೆಗೆ ಕಾಳಿ ಬ್ರಿಗೇಡ್ ಮೊದಲ ಹೆಜ್ಜೆ ಇಡಲಿದೆ. ಚುನಾವಣೆಯ ಬಳಿಕ ಗ್ರಾಮಾಂತರ ಭಾಗಗಳಲ್ಲೂ ಶಾಖೆಗಳನ್ನು ತೆರೆದು ಸಮಾಜ ಸೇವೆಗೆ ಶ್ರಮಿಸಲಾಗುವುದು ಎಂದರು.
ಸಂಘಟನೆಯ ಶಾಂತಾರಾಮ ಸೂರ್ಯವಂಶಿ ಮಾತನಾಡಿ ಸಂಧ್ಯಾಸುರಕ್ಷಾ, ವಿಧವಾ, ಅಂಗವಿಕಲ ವೇತನಗಳನ್ನು ಮಂಜೂರಿ ಮಾಡಿಸಲು ದಾಖಲೆಗಳನ್ನು ಮುಂದೆ ಸಾಗಿಸಲು ಶಾನಭೋಗರು, ಕಂದಾಯ ಅಧಿಕಾರಿಗೆ ದುಡ್ಡು ನೀಡಬೇಕಾಗಿದೆ ಇಲ್ಲವಾದರೇ ದಾಖಲೆ ಮುಂದೆ ಹೊಗುವುದಿಲ್ಲ ಎಂದು ಆರೋಪಿಸಿದ ಅವರು ಇದು ಸ್ವತಃ ತಮಗೆ ಆಗಿರುವ ಅನುಭವ ಎಂದು ಹಳಿಯಾಳದಲ್ಲಿ ಭ್ರಷ್ಟಾಚಾರ ಎಲ್ಲೆ ಮಿರಿದ್ದು ಹೋರಾಟದ ಅನಿವಾರ್ಯತೆ ಇದೆ ಎಂದರು.
ಕಾಳಿ ಬ್ರಿಗೇಡ್ ಹಳಿಯಾಳ ಶಾಖೆಯ ಅಧ್ಯಕ್ಷ ಯಲ್ಲಾರಿ ಅರಿಶೀನಗೇರಿ, ಜೋಯಿಡಾದ ಸತೀಶ ನಾಯ್ಕ, ಎಸ್.ಜಿ ದೇಸಾಯಿ, ಖಾನಾಪುರದ ನೇತಾಜಿ ದೇಸಾಯಿ, ಹಳಿಯಾಳದ ಗಣಪತಿ ಅಂಬೊಳ್ಳಿ, ಕೇದಾರಿ ಅಳ್ವಾಡಕರ, ಪರಶುರಾಮ ಚೊರ್ಲೆಕರ, ಸೆಬಿಸ್ಟಿನ್ ಪಿಂಟೋ, ರಾಜು ಶೀಂಧೆ, ಮಲ್ಲೇಶಿ ನಾಯ್ಕ, ಸಂಜು ದೇವಕಾರಿ, ಪ್ರಮೋದ ಜಾವಳಿಕರ, ಮೊಹನ ಗುರವ, ಮಹಾದೇವ ಕೆಳೋಜಿ, ನಾರಾಯಣ ಮೊರೆ, ಸ್ಯಾಮುವೆಲ ಹಂಚಿನಮನಿ, ಅಗ್ನೇಲ್ ಹಂಚಿನಮನಿ, ಮೊನು ದೊಡ್ಮನಿ, ನಾಗರಾಜ, ನಾರಾಯಣ ಮೆತ್ರಿ, ಮಂಜುನಾಥ ಮಾದರ, ರಾಮದಾಸ ಧಾಮನೆಕರ, ತಮ್ಮಣ್ಣಾ ಸಿದಬಾನವರ ಮೊದಲಾದವರು ಇದ್ದರು.
Leave a Comment