ಹಳಿಯಾಳ :- ಸರಾಯಿ ಚಟಕ್ಕಾಗಿ ಹಣ ನೀಡಲಿಲ್ಲವೆಂದು ಹೆತ್ತ ತಾಯಿಯನ್ನು ಮಾರಕಾಸ್ತ್ರ (ಕೊಯ್ತಾ) ದಿಂದ ಕೊಚ್ಚಿ ಕೊಲೆ ಮಾಡಿರುವ ವಿದ್ಯಮಾನ ಹಳಿಯಾಳದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಹಳಿಯಾಳದ ಚೌಹಾನ್ ಪ್ಲಾಟ್ ಬಳಿಯ ಸ್ಲಂ ಏರಿಯಾದಲ್ಲಿ ಈ ದುರ್ಘಟನೆ ನಡೆದಿದೆ.
ಕೊಲೆಯಾದ ದುರ್ದೈವಿ ಭೀಮವ್ವ ರುಕ್ಮನ ಅಮರಾಪುರ 80 ವರ್ಷ ಆಗಿದ್ದಾಳೆ.
ಈಕೆಯ ಮಗ ಅಣ್ಣಪ್ಪ ಅಮರಾಪುರ ಕೊಲೆಗಡುಕ ನಾಗಿದ್ದಾನೆ.
ಆರೋಪಿಯನ್ನು ಬಂಧಿಸಲಾಗಿದ್ದು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳಿಯಾಳ ಪಿಎಸ್ಐ ಆನಂದ ಮೂರ್ತಿ ಲೋಕಾಪುರ್ ಹಾಗೂ ಡಿವೈಎಸ್ಪಿ ಮೋಹನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Leave a Comment